SHIVAMOGGA LIVE NEWS | 19 SEPTEMBER 2023
BHADRAVATHI : ನೀಲಗಿರಿ ಮರಗಳನ್ನು (Nilgiri Trees) ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬಳನ್ನು (Woman) ಭದ್ರಾವತಿಯಲ್ಲಿ ಹತ್ಯೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಭರಮ ಸಾಗರದ ರೂಪಾ (30) ಮೃತ ಮಹಿಳೆ. ಆಕೆಯ ಸ್ನೇಹಿತ ಸಿಂಗಾರಿ (35) ಎಂಬಾತನೆ ಹತ್ಯೆ ಮಾಡಿದವನು.
ಭದ್ರಾವತಿ ತಾಲೂಕು ಸಂಕ್ಲೀಪುರದಲ್ಲಿ ಎಂಪಿಎಂನ ನೀಲಗಿರಿ ತೋಪಿನಲ್ಲಿ ಮರಗಳ ಕಡಿತಲೆಗೆ ರೂಪಾ ಬಂದಿದ್ದಳು. ಇಲ್ಲಿ ಸಿಂಗಾರಿ ಎಂಬಾತನ ಪರಿಚಯವಾಗಿತ್ತು. ಭಾನುವಾರ ತಡರಾತ್ರಿ ಸಿಂಗಾರಿ ಮತ್ತು ರೂಪಾ ಮಧ್ಯೆ ಗಲಾಟೆಯಾಗಿದೆ. ಸಿಂಗಾರಿಯು ರೂಪಾಳ ಕಾಲಿನಲ್ಲಿ ಒದ್ದು, ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದ ಆರೋಪಿಸಲಾಗಿದೆ.
‘ಹತ್ಯೆ ಮಾಡಿದವನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ವಾಟ್ಸಪ್ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ – ತೀರ್ಥಹಳ್ಳಿ ಮೂಲದ ಶಂಕಿತ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್
‘ರೂಪಾಳ ಪತಿ ಕೆಲ ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಭದ್ರಾವತಿಯಲ್ಲಿ ನೀಲಗಿರಿ ಮರಗಳನ್ನು ಕಡಿಯುವ ಕೆಲಸದಲ್ಲಿ ರೂಪಾ ತೊಡಗಿಸಿಕೊಂಡಿದ್ದಳು. ಈ ವೇಳೆ ವ್ಯಕ್ತಿಯೊಬ್ಬನ ಪರಿಚಯವಾಗಿದ್ದು, ಆತನೊಂದಿಗೆ ಲೀವ್ ಇನ್ (Live In Relationship) ಸಂಬಂಧ ಹೊಂದಿದ್ದಳು. ಅದೇ ವ್ಯಕ್ತಿಯೇ ರೂಪಾಳ ಹತ್ಯೆ ಮಾಡಿದ್ದಾನೆʼ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200