| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE | 10 JULY 2023
SHIMOGA : ಮನೆಯಿಂದಲೆ ಕೆಲಸದ (Work From Home) ನೆಪದಲ್ಲಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 89,500 ರೂ. ವಂಚನೆ ಮಾಡಲಾಗಿದೆ. ಟೆಲಿಗ್ರಾಂ ಅಪ್ಲಿಕೇಷನ್ನಲ್ಲಿ ಟಾಸ್ಕ್ ಪೂರೈಸಿದರೆ ಕಮಿಷನ್ ಕೊಡುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಲಾಗಿದೆ.
ಹೇಗಾಯ್ತು ವಂಚನೆ?
ಶಿವಮೊಗ್ಗ ನಗರದ ಗೃಹಿಣಿಯೊಬ್ಬರು Work From Home ಕುರಿತು ಆನ್ಲೈನ್ನಲ್ಲಿ ಹುಡುಕಿದ್ದರು. ಅವರ ಟೆಲಿಗ್ರಾಂ ಖಾತೆಗೆ ವಿಕ್ಕಿ ಎಂಬಾತನ ಹೆಸರಿನಲ್ಲಿ ಮೆಸೇಜ್ ಬಂದಿದ್ದು, ಹಣ ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದರೆ ಮತ್ತು ತಮ್ಮ ಉತ್ಪನ್ನಗಳನ್ನು ಖರೀದಿಸಿದರೆ ಕಮಿಷನ್ ನೀಡುವುದಾಗಿ ತಿಳಿಸಿದ್ದ. ಇದನ್ನು ನಂಬಿದ ಗೃಹಿಣಿ ವಾಚ್ ಖರೀದಿಸಿದ್ದರು. ಹಾಗಾಗಿ ಅವರ ಖಾತೆಗೆ 1500 ರೂ. ಹಣ ಕಮಿಷನ್ ರೂಪದಲ್ಲಿ ಬಂದಿತ್ತು.
ಇದನ್ನೂ ಓದಿ – ಶಿವಮೊಗ್ಗದ ವಿದ್ಯಾರ್ಥಿನಿ ಇನ್ಸ್ಟಾಗ್ರಾಂ ಖಾತೆಗೆ ಬಂತು ಎರಡು ಫ್ರೆಂಡ್ ರಿಕ್ವೆಸ್ಟ್, ಪರಿಶೀಲಿಸಿದಾಗ ಕಾದಿತ್ತು ಶಾಕ್
ಹಲವು ವಸ್ತುಗಳ ಖರೀದಿಗೆ ಯತ್ನ
ಮತ್ತಷ್ಟು ವಸ್ತುಗಳನ್ನು ಖರೀದಿಸಿದರೆ ಕಮಿಷನ್ ಹಾಕುವುದಾಗಿ ತಿಳಿಸಿ ವಿಕ್ಕಿ ಎಂಬಾತ ಫೋನ್ ಪೇ ಐಡಿ ಕಳುಹಿಸಿದ್ದ. ಹಲವು ವಸ್ತುಗಳ ಖರೀದಿಗೆ ಗೃಹಿಣಿ ಹಣ ವರ್ಗಾಯಿಸಿದ್ದರು. 89,500 ರೂ. ವರ್ಗಾಯಿಸಿದರೂ ಮತ್ತಷ್ಟು ಹಣ ಹಾಕುವಂತೆ ಆತ ಒತ್ತಾಯಿಸಿದ್ದ. ಇದರಿಂದ ಅನುಮಾನಗೊಂಡು ಪತಿಗೆ ವಿವರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆ ಗೃಹಿಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
![]()
ಪಾರ್ಟ್ ಟೈಮ್ ಹೆಸರಲ್ಲಿ ವಂಚನೆ ಇದೆ ಮೊದಲಲ್ಲ
ಮನೆಯಿಂದಲೆ ಕೆಲಸ, ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಂಚನೆ ನಡೆಯುತ್ತಿರುವುದು ಇದೆ ಮೊದಲಲ್ಲ. ಹಲವು ಮಹಿಳೆಯರು, ಗೃಹಿಣಿಯರಿಗೆ ಟೆಲಿಗ್ರಾಂ ಮೂಲಕ ಮೆಸೇಜ್ ಮಾಡಿ, ಟಾಸ್ಕ್ ಪೂರೈಸುವಂತೆ ತಿಳಿಸಿ ಹಣ ವಂಚನೆ ಮಾಡಲಾಗಿದೆ. ಅನಾಮಿಕರೊಂದಿಗೆ ಹಣಕಾಸು ವ್ಯವಹಾರ ಅಪಾಯ ತಂದೊಡ್ಡಲಿದೆ. ಆದ್ದರಿಂದ ಹಣ ವರ್ಗಾಯಿಸುವುದು ಸುರಕ್ಷಿತವಲ್ಲ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
- ‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ
- ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
- ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?
![]()