SHIVAMOGGA LIVE NEWS | 26 JUNE 2024
SAGARA : ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯಕ್ಷಗಾನ (Yakshagana) ಭಾಗವತ ವೇಣುಗೋಪಾಲ್ (35) ಕೊನೆಯುಸಿರೆಳೆದಿದ್ದಾರೆ.
ಪುರಪ್ಪೆಮನೆ ಕೆಳಮನೆ ಗ್ರಾಮದ ವೇಣುಗೋಪಾಲ್ ಅವರು ಸೋಮವಾರ ರಾತ್ರಿ ಬೈಕ್ನಲ್ಲಿ ಮನೆಗೆ ಬರುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹೋರಿ ಅಡ್ಡಬಂದಿದೆ. ಈ ಸಂದರ್ಭ ಬೈಕ್ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.
ಇವರು ಕೆಳಮನೆ ಮೇಳದ ಭಾಗವತ ಕೆ.ಜಿ.ರಾಮರಾವ್ ಅವರ ಪುತ್ರ. ಇವರೂ ಸಹ ಸಿಗಂದೂರು ಮೇಳದ ಪ್ರಮುಖ ಭಾಗವತರಾಗಿದ್ದರು. ಸಾಲಿಗ್ರಾಮ ಮೇಳ, ಮಂದಾರ್ತಿ ಮೇಳ ಸೇರಿದ ಹಲವು ಮೇಳಗಳಲ್ಲಿ ಭಾಗವತರಾಗಿದ್ದರು. ವಿವಿಧ ರಾಗಗಳನ್ನು ಸ್ಪಷ್ಟವಾಗಿ ಹಾಡುವ ಉತ್ತಮ ಕಂಠ ಹೊಂದಿದ್ದರು.
ಇದನ್ನೂ ಓದಿ – ಹಾಲಿನ ಕ್ಯಾಂಟರ್, ಓಮ್ನಿ ಕಾರು ಮುಖಾಮುಖಿ ಡಿಕ್ಕಿ, ಒಬ್ಬ ಸಾವು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200