SHIVAMOGGA LIVE NEWS | 18 APRIL 2023
SHIMOGA : ವಿಧಾನಸಭೆ ಚುನಾವಣೆ ತರಬೇತಿಗೆ ಗೈರಾದ ಜಿಲ್ಲೆಯ 117 ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ನೊಟೀಸ್ (Notice) ಜಾರಿ ಮಾಡಿದ್ದಾರೆ. ಪಿಅರ್ಓ ಮತ್ತು ಎಪಿಆರ್ಓ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲಾಗಿತ್ತು.
ಏಪ್ರಿಲ್ 16ರಂದು ಪಿಆರ್ಓ ಮತ್ತು ಎಪಿಆರ್ಓ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲಾಗಿತ್ತು. ಈ ತರಬೇತಿಗೆ ಜಿಲ್ಲೆಯಾದ್ಯಂತ 117 ಅಧಿಕಾರಿಗಳು ಗೈರಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 11, ಭದ್ರಾವತಿ 21, ಶಿವಮೊಗ್ಗ ನಗರ 35, ತೀರ್ಥಹಳ್ಳಿ 9, ಶಿಕಾರಿಪುರ 7, ಸೊರಬ 5, ಸಾಗರ 29 ಅಧಿಕಾರಿಗಳು ಗೈರಾಗಿದ್ದಾರೆ. ಈ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನೊಟೀಸ್ (Notice) ಜಾರಿ ಮಾಡಿದ್ದಾರೆ.
ಇದನ್ನೂ ಓದಿ – ಚುನಾವಣೆ ಹಿನ್ನೆಲೆ, ಜನ ಎಷ್ಟು ದುಡ್ಡು ಕೊಂಡೊಯ್ಯಬಹುದು, ಹಣ ಸೀಜ್ ಆದರೆ ಏನೆಲ್ಲ ದಾಖಲೆ ಒದಗಿಸಬೇಕು?