SHIVAMOGGA LIVE NEWS | 2 SEPTEMBER 2023
BHADRAVATHI : ಪ್ರತ್ಯೇಕ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ಅನಧಿಕೃತವಾಗಿ ಗೈರಾದ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಿ (suspension) ಡಿಡಿಪಿಐ ಸಿ.ಆರ್ .ಪರಮೇಶ್ವರ್ ಆದೇಶಿಸಿದ್ದಾರೆ.
ಭದ್ರಾವತಿ ತಾಲೂಕಿನ ಬಿ.ಆರ್.ಪ್ರಾಜೆಕ್ಟ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್. ಶಾಂತರಾಜಪ್ಪ ಮತ್ತು ದೊಡ್ಡಗೊಪ್ಪೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (School) ಸಹ ಶಿಕ್ಷಕಿ ಸವಿತಾ ಕ್ರಿಸ್ತಿನ್ ಮೆಂಡೋನ್ಸಾ ಸೇವೆಯಿಂದ ಅಮಾನತುಗೊಂಡವರು.
ಇದನ್ನೂ ಓದಿ – ನಮ್ಮೂರ ಹೆಣ್ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಅಂತಾ ಊರ ಮುಂದೆ ಬ್ಯಾನರ್ ಕಟ್ಟಿದ ಗ್ರಾಮಸ್ಥರು, ಕಾರಣವೇನು?
ಶಾಂತರಾಜಪ್ಪ ಅವರು ಕಳೆದ 2023ರ ಜೂ.30ರಿಂದ ಜು.8ರವರೆಗೆ ಮತ್ತು ಜು.15ರಿಂದ ಆಗಸ್ಟ್ 12ರವರೆಗೆ ಶಾಲಾ ಕರ್ತವ್ಯಕ್ಕೆ ಗೈರಾಗಿದ್ದರು. ಅಕ್ಷರ ದಾಸೋಹ ಕಾರ್ಯಕ್ರಮದ ಪುಸ್ತಕಗಳನ್ನು ಶಾಲೆಯಲ್ಲಿ ಇಡದೆ ಮನೆಗೆ ಕೊಂಡೊಯ್ದಿದ್ದಾರೆ. 71,238 ರೂ. ದುರುಪಯೋಗ ಮಾಡಿಕೊಂಡಿರುವುದು ಸೇರಿದಂತೆ ವಿವಿಧ ಕಾರಣಕ್ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ಶಾಂತರಾಜಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸಹ ಶಿಕ್ಷಕಿ ಸವಿತಾ ಅವರು 2022ರ ಮೇ 17ರಿಂದ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮಕ್ಕಳಿಗೆ ಕಿರುಕುಳ ನೀಡುವುದು, ಪಾಲಕರೊಂದಿಗೆ ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ವಿವಿಧ ಆರೋಪ ಕೇಳಿ ಬಂದಿತ್ತು. ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿದ್ದರಿಂದ ಡಿಡಿಪಿಐ ಪರಮೇಶ್ವರ್ ಅವರು ಅಮಾನತುಗೊಳಿಸಿದ್ದಾರೆ.