SHIVAMOGGA LIVE NEWS | 5 SEPTEMBER 2023
SHIMOGA : ನಾಗರಿಕರ ಅನುಕೂಲಕ್ಕಾಗಿ ಹೊಸಮನೆ ಬಡಾವಣೆ ಮತ್ತು ಶರಾವತಿ ನಗರದಲ್ಲಿ ಪೊಲೀಸ್ ಚೌಕಿ (Police Chowki) ನಿರ್ಮಿಸಬೇಕು ಎಂದು ಆಗ್ರಹಿಸಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಳೆ, ತಾಪಮಾನ ಇಳಿಕೆ, ಸದ್ಯಕ್ಕೀಗ ನಗರದಲ್ಲಿ ಕೂಲ್ ಕೂಲ್ ವಾತಾವರಣ
ಎರಡು ಬಡಾವಣೆಗಳಲ್ಲಿ ಸುಮಾರು 26 ಸಾವಿರ ಜನರಿದ್ದಾರೆ. ಇಲ್ಲಿ ಮಧ್ಯಮ ವರ್ಗ, ಕೂಲಿ ಕಾರ್ಮಿಕರು ಹೆಚ್ಚು. ಚಾನಲ್ ಏರಿ ಮೇಲೆ ಯುವಕರು ಬೈಕ್ಗಳನ್ನು ವೇಗವಾಗಿ ಚಲಾಯಿಸುತ್ತಿದ್ದು, ಅಪಘಾತದ ಭೀತಿ ಎದುರಾಗಿದೆ. ಮಾದಕ ವಸ್ತು ವ್ಯಸನಿಗಳು ನಾಗರಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಪೊಲೀಸ್ ಚೌಕಿ ಅಗತ್ಯವಿದೆ ಎಂದು ರೇಖಾ ರಂಗನಾಥ ಮನವಿಯಲ್ಲಿ ತಿಳಿಸಿದರು.