ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 25 ಸೆಪ್ಟೆಂಬರ್ 2019
![ಭದ್ರಾವತಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಸಿಎಂ, ಒಂಭತ್ತು ದಿನ ವಿಭಿನ್ನ ಕಾರ್ಯಕ್ರಮ, ಏನೆಲ್ಲ ವಿಶೇಷತೆಗಳಿವೆ? 1 71715902 931935800501174 8807498256322920448 n.jpg? nc cat=103& nc oc=AQnhXX3hG2nlzAoar SO2MnFCStCgMmanotOjFxpUENbJ4wD48HsAqF8irPWVH44 xMZIOQ2 fQNWhPrtiFrVPr6& nc ht=scontent.fblr1 3](https://scontent.fblr1-3.fna.fbcdn.net/v/t1.0-9/71715902_931935800501174_8807498256322920448_n.jpg?_nc_cat=103&_nc_oc=AQnhXX3hG2nlzAoar_SO2MnFCStCgMmanotOjFxpUENbJ4wD48HsAqF8irPWVH44-xMZIOQ2-fQNWhPrtiFrVPr6&_nc_ht=scontent.fblr1-3.fna&oh=b830adef80dde2df12c635100ea696e7&oe=5E3C27EC)
ಭದ್ರಾವತಿ ನಗರಸಭೆ ವತಿಯಿಂದ ಈ ಬಾರಿ ವಿಭಿನ್ನವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಒಂಭತ್ತು ದಿನ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕೊನೆಯ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
![ಭದ್ರಾವತಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಸಿಎಂ, ಒಂಭತ್ತು ದಿನ ವಿಭಿನ್ನ ಕಾರ್ಯಕ್ರಮ, ಏನೆಲ್ಲ ವಿಶೇಷತೆಗಳಿವೆ? 2 Prashanth GPS copy](https://shivamoggalive.com/wp-content/uploads/2019/09/Prashanth-GPS-copy.jpg)
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, 21.5 ಲಕ್ಷ ರೂ. ವೆಚ್ಚದಲ್ಲಿ ವಿಭಿನ್ನವಾಗಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಇದೆ ಮೊದಲ ಬಾರಿ ಭದ್ರಾವತಿಯಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು ತಿಳಿಸಿದರು.
ಏನೆಲ್ಲ ಕಾರ್ಯಕ್ರಮಗಳು ಇರಲಿವೆ?
ಸೆಪ್ಟಂಬರ್ 29ರಂದು ಗ್ರಾಮದೇವತೆ ಹಳದಮ್ಮ ದೇವಸ್ಥಾನದಲ್ಲಿ ಡಾ.ಕೆ.ಎಸ್.ಕುಮಾರಸ್ವಾಮಿ ಅವರು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ನವರಾತ್ರಿ ಉತ್ಸವ ಆರಂಭವಾಗಲಿದೆ. ಯುವ ದಸರಾ, ಪರಿಸರ ದಸರಾ, ಯೋಗ ದಸರಾ, ಮಹಿಳಾ ದಸರಾ, ರಂಗ ದಸರಾ, ಮಕ್ಕಳ ದಸರಾ ನಡೆಯಲಿದೆ.
ಅಕ್ಟೋಬರ್ 7ರಂದು ಆಯುಧಪೂಜೆ ನೆರವೇರಲಿದೆ. ಅ.8ರಂದು ಲೋಯರ್ ಹುತ್ತಾದ ಶ್ರೀ ತಿರುಮಲ ದೇವಸ್ಥಾನದಿಂದ ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಸಂಗಮೇಶ್ವರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
![ಭದ್ರಾವತಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಸಿಎಂ, ಒಂಭತ್ತು ದಿನ ವಿಭಿನ್ನ ಕಾರ್ಯಕ್ರಮ, ಏನೆಲ್ಲ ವಿಶೇಷತೆಗಳಿವೆ? 3 71116910 931987063829381 5513261823509397504 n.jpg? nc cat=108& nc oc=AQkRP6GuBo0XjrLgFGpuKm8IyS IukV9ec7s4h iLFDL45WXl9GWM7ppKTrPyTpOGwoWz0plaK Pwkx7lCjAe5Ol& nc ht=scontent.fblr1 4](https://scontent.fblr1-4.fna.fbcdn.net/v/t1.0-9/71116910_931987063829381_5513261823509397504_n.jpg?_nc_cat=108&_nc_oc=AQkRP6GuBo0XjrLgFGpuKm8IyS_IukV9ec7s4h_iLFDL45WXl9GWM7ppKTrPyTpOGwoWz0plaK_Pwkx7lCjAe5Ol&_nc_ht=scontent.fblr1-4.fna&oh=2315fbee25ac8738691b7cbc94f98812&oe=5DF80181)
ಆ ದಿನ ನಗರದ ವಿವಿಧ ದೇವಸ್ಥಾನಗಳ ದೇವ, ದೇವತೆಗಳ ಅಲಂಕೃತ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಕನಕ ಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮವಿರುತ್ತದೆ ಎಂದು ಆಯುಕ್ತ ಮನೋಹರ್ ತಿಳಿಸಿದ್ದಾರೆ.
ನಗರಸಭೆ ಅಧಿಕಾರಿಗಳಾದ ಸುಹಾಸಿನಿ, ರಾಜ್’ಕುಮಾರ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
![ಭದ್ರಾವತಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಸಿಎಂ, ಒಂಭತ್ತು ದಿನ ವಿಭಿನ್ನ ಕಾರ್ಯಕ್ರಮ, ಏನೆಲ್ಲ ವಿಶೇಷತೆಗಳಿವೆ? 4 70988446 931935983834489 2058998598623821824 n.jpg? nc cat=107& nc oc=AQnlgiFvHB0Ql1ZvMcUVcgUt3NoY 25GBcf4o8vydgCZS4sTMOYC7wlFIB0B1OZGBO79DO1ISwyf0DfoUFRfFRqj& nc ht=scontent.fblr1 3](https://scontent.fblr1-3.fna.fbcdn.net/v/t1.0-9/70988446_931935983834489_2058998598623821824_n.jpg?_nc_cat=107&_nc_oc=AQnlgiFvHB0Ql1ZvMcUVcgUt3NoY-25GBcf4o8vydgCZS4sTMOYC7wlFIB0B1OZGBO79DO1ISwyf0DfoUFRfFRqj&_nc_ht=scontent.fblr1-3.fna&oh=956bb0eef5fadec6505b4b17ae48b7c4&oe=5E33BBA5)
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಶಿವಮೊಗ್ಗ ಲೈವ್.ಕಾಂ