ಮೇಷ : ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಲು ಹಿರಿಯ ರಾಜಕಾರಣಿಯ ಕೃಪೆ ಪಡೆಯಬೇಕು. ಪುತ್ರನಿಗೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು.
ವೃಷಭ : ವೃತ್ತಿಯ ಸೂಕ್ಷ್ಮ ವಿಷಯ ಅರಿತು ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ. ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ. ಉದ್ಯೋಗದಲ್ಲಿನ ಅನಿಶ್ಚಿತತೆ ದೂರಾಗಲಿದೆ.
ಮಿಥುನ : ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದು ಅನುಕೂಲ ತರಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಪ್ರಗತಿ.
ಕರ್ಕಾಟಕ : ತೆರೆ ಮರೆಯ ಸಂಚು ಅರಿವಿಗೆ ಬರಲಿದೆ. ಹೂಡಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಯೋಚಿಸುವುದು ಉತ್ತಮ.
ಸಿಂಹ : ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಸ್ವಲ್ಪ ಹಿನ್ನಡೆ. ಕಣ್ಣಿನ ದೋಷ ಉಂಟಾಗಲಿದೆ. ಮಕ್ಕಳ ಬಗ್ಗೆ ಗಮನವಿರಲಿ.
ಕನ್ಯಾ : ದಾಯಾದಿ ಕಲಹಗಳು ನಿರ್ಮೂಲನೆಯಾಗಲಿದೆ. ಷೇರು ವ್ಯವಹಾರದಲ್ಲಿ ಹೆಚ್ಚಿನ ಹಣ ಹೂಡಿಕೆ. ಅತಿಯಾದ ಆಲಸ್ಯ ಸಮಸ್ಯೆ ತರಲಿದೆ.
ತುಲಾ : ಗುರುವಿನ ಮಾರ್ಗದರ್ಶನದಂತೆ ಸಾಗಿದರೆ ಅಭಿವೃದ್ಧಿ ಆಗಲಿದೆ. ಭೂ ವ್ಯವಹಾರಗಳ ಸಮಸ್ಯೆ ನಿವಾರಣೆ. ಆದಾಯ ಹೆಚ್ಚಳ.
ವೃಶ್ಚಿಕ : ಪಾಪ ಪ್ರಜ್ಞೆ ಕಾಡಲಿದೆ. ಧಾರ್ಮಿಕ ವಿಚಾರಗಳತ್ತ ಮನಸು ಸೆಳೆಯಲಿದೆ. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
ಧನು : ಪ್ರಭಾವಿಗಳಿಂದ ನೆರವು ದೊರೆಯಲಿದೆ. ವಿರೋಧಿಗಳು ರಾಜಿಯಾಗಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿ.
ಮಕರ : ಮೇಲಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯಲಿದೆ. ಯಾವುದೆ ವಿಚಾರದ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬರುವುದು ಕಷ್ಟಕರ ವಾತಾವರಣ.
ಕುಂಭ : ವಿದೇಶಿ ವ್ಯವಹಾರಗಳು ಕೈಗೂಡಲಿದೆ. ಕಲಾವಿದರಿಗೆ ಅವಕಾಶಗಳು ಲಭಿಸಲಿವೆ. ಉದ್ಯೋಗ ಸ್ಥಳದಲ್ಲಿ ಅಡ್ಡಿ ಆತಂಕಗಳು ಎದುರಾಗಲಿದೆ.
ಮೀನ : ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದೆ ಪರಿತಪಿಸುವಂತಾಗಲಿದೆ.
ಇದನ್ನೂ ಓದಿ – ಗಣೇಶ ಹಬ್ಬ, ಈದ್ ಮಿಲಾದ್, ಶಿವಮೊಗ್ಗದಲ್ಲಿ ಮಿನಿಸ್ಟರ್ ನೇತೃತ್ವದಲ್ಲಿ ಮಹತ್ವದ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು?