ದಿನ ಭವಿಷ್ಯ | ಈ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಗೌರವ, ಉಡುಗೊರೆಗಳು ಸಿಗಲಿದೆ, ಯಾವ್ಯಾವ ರಾಶಿಗೆ ಹೇಗಿದೆ ಇವತ್ತು?

DINA-BHAVISHYA

Meshaಮೇಷ

ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಖರ್ಚು ವೆಚ್ಚಗಳ ಮೇಳೆ ನಿಗಾ ಇರಲಿ. ನೆರೆಹೊರೆಯವರೊಂದಿಗೆ ಜಗಳ ಸಾಧ್ಯತೆ. ಸಂಗಾತಿ ಜೊತೆಗೆ ಹೆಚ್ಚು ಸಮಯ ಕಳೆಯಿರಿ.

Vrushabaವೃಷಭ

ಸ್ನೇಹಿತರೊಂದಿಗೆ ಸುತ್ತಾಟ. ಹಣದ ಖರ್ಚಿನ ಮೇಲೆ ನಿಗಾ ಇರಲಿ. ಸಂಬಂಧಿಕರು ಮನೆಗೆ ಬರುವ ಸಾಧ್ಯತೆ. ಯೋಜನೆಗಳು ತಲೆಕೆಳಗಾಗಬಹುದು ಎಚ್ಚರ.

Mithunaಮಿಥುನ

ಹಠಾತ್‌ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ವ್ಯಾಪಾರ, ವ್ಯವಹಾರದ ಉದ್ದೇಶಕ್ಕೆ ಹೆಚ್ಚು ಸುತ್ತಾಡಬೇಕಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.

Karkatakaಕರ್ಕಾಟಕ

ಸಾಲ ಸಿಗಲಿದೆ. ಯಾವುದೆ ಕೆಲಸಕ್ಕೆ ಮುನ್ನ ಪೋಷಕರ ಆಶೀರ್ವಾದ ಅಗತ್ಯ. ವೈವಾಹಿಕ ಜೀವನದ ಏರಿಳಿತದಿಂದ ನೊಂದಿದ್ದೀರ. ಇವತ್ತು ಶುಭ ಸುದ್ದಿ ಸಿಗಲಿದೆ.

Kalleshwara-Enterprises.webp

Simhaಸಿಂಹ

ತಂದೆಯ ಸಲಹೆ ಪಡೆದು ಮುಂದುವರೆದರೆ ಲಾಭ. ಅನುಭವಿಗಳ ಜೊತೆಗಿನ ಒಡನಾಟದಿಂದ ಅನುಕೂಲಕರ. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು.

Kanyaಕನ್ಯಾ

ಉತ್ತಮ ಕೆಲಸಕ್ಕಾಗಿ ಕೆಲಸದ ಸ್ಥಳದಲ್ಲಿ ಗೌರವ ಲಭಿಸಲಿದೆ. ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಈ ಹಿಂದಿನ ನಿಮ್ಮ ಹೂಡಿಕೆಗಳಿಂದ ಲಾಭ ಸಿಗಲಿದೆ.

Thulaತುಲಾ

ಪ್ರಸಿದ್ಧಿ ಪಡೆಯಬಹುದು. ಇವತ್ತು ನಿಮ್ಮ ಬಳಿ ಹೇರಳ ಸಮಯ ಇದ್ದರೂ ಯಾವುದೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆರೋಗ್ಯದ ಕಡೆ ಗಮನವಿರಲಿ.

Vrushikaವೃಶ್ಚಿಕ

ಗ್ರಹ, ನಕ್ಷತ್ರಗಳ ಚಲನೆಯಿಂದಾಗಿ ನಿಮಗೆ ಹಣ ಸಂಪಾದಿಸಲು ಹಲವು ಅವಕಾಶ ಲಭಿಸಲಿದೆ. ಕೌಟುಂಬಿಕ ಸಮಸ್ಯೆ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತೀರ.

Dhanuಧನಸ್ಸು

ನಿಮ್ಮ ವ್ಯಕ್ತಿತ್ವದಿಂದಾಗಿ ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಸಮಯ ಪರಿಪಾಲನೆ ಮಾಡುವುದರಿಂದ ನಿಮಗೆ ಮತ್ತು ಕುಟುಂಬಕ್ಕೆ ಲಾಭವಾಗಲಿದೆ.

Makaraಮಕರ

ಆರೋಗ್ಯದಲ್ಲಿ ಏರುಪೇರು. ಹಳೆಯ ಕಾಯಿಲೆ ಉಲ್ಬಣಿಸಬಹುದು. ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ಸೃಜನಶೀಲತೆ ಪ್ರದರ್ಶನ ಇವತ್ತು ಒಳ್ಳೆಯದಲ್ಲ.

DINA-BHAVISHYA-MITHUN-AUTHOR1

Kumbaಕುಂಭ

ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ. ವಿದೇಶಿ ವ್ಯವಹಾರ ನಡೆಸುತ್ತಿದ್ದರೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ ಲಭಿಸುವುದು.

Meenaಮೀನ

ಪ್ರೀತಿಪಾತ್ರರೊಂದಿಗೆ ವಾದ, ವಿವಾದ ಉಂಟಾಗಬಹುದು. ಪ್ರಭಾವಿಗಳ ಬೆಂಬಲದಿಂದ ನೈತಿಕ ಸ್ಥೈರ್ಯ ಸಿಗಲಿದೆ. ಕೆಲಸದ ಸ್ಥಳದಲ್ಲಿ ಯಾರ ಸಹಾಯದ ನಿರೀಕ್ಷೆ ಮಾಡಬೇಡಿ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment