SHIVAMOGGA LIVE NEWS | 10 OCTOBER 2023
THIRTHAHALLI : ಕಾಡಾನೆಯೊಂದು (Elephant) ಗದ್ದೆ, ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಫಸಲು ಬರುತ್ತಿದ್ದ ಅಡಕೆ ಗಿಡಗಳು, ಭತ್ತ ನೆಲ ಕಚ್ಚಿದೆ. ತೋಟದ ಗೇಟುಗಳನ್ನು ಪುಡಿಗೈದಿದೆ.
ತೀರ್ಥಹಳ್ಳಿ ತಾಲೂಕು ಸಿಂಗನಬಿದಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಲೆ ಭಾಗದಲ್ಲಿ ಭಾನುವಾರ ರಾತ್ರಿ ಘಟನೆ ಸಂಭವಿಸಿದೆ. ಕಾಡಾನೆ ದಾಳಿಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಿರ್ಮಲಾ, ಯೋಗೀಶ್, ಪದ್ಮಾವತಿ, ಉದಯ ಶೆಟ್ಟಿ, ಪುಷ್ಪಾ, ಸೀತಾಲಕ್ಷ್ಮೀ ಅವರ ಗದ್ದೆ, ತೋಟಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ಮೂವರು ಸಜೀವ ದಹನ, ಸ್ಥಳಕ್ಕೆ ಎಂಎಲ್ಎ ದೌಡು, ಘಟನೆ ಕುರಿತು ಹೇಳಿದ್ದೇನು?