ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಸಾಗರ | 27 ಸೆಪ್ಟೆಂಬರ್ 2019
![ಸಿಗಂದೂರು ಲಾಂಚ್ ಬಳಿ ನಕಲಿ ಟೋಲ್ ರಶೀದಿ, ಸರ್ಕಾರದ ಹಣ ಗುಳಂ, ಎಸಿಬಿ ತನಿಖೆ ಸಾಧ್ಯತೆ 1 71277435 931935923834495 7594788496263348224 n.jpg? nc cat=104& nc oc=AQkviEJRkFvJPqUhsnS1rjJvVDv1VDn1D54EHECP4K0iolRtgruiakfFxj4bEv8oGfpk0ETKdcTDdfQfSSodxlmV& nc ht=scontent.fixe1 1](https://scontent.fixe1-1.fna.fbcdn.net/v/t1.0-9/71277435_931935923834495_7594788496263348224_n.jpg?_nc_cat=104&_nc_oc=AQkviEJRkFvJPqUhsnS1rjJvVDv1VDn1D54EHECP4K0iolRtgruiakfFxj4bEv8oGfpk0ETKdcTDdfQfSSodxlmV&_nc_ht=scontent.fixe1-1.fna&oh=c732f827f147af5c7a2f4667e9b3d37d&oe=5E315988)
ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ ಲಾಂಚ್ ಟೋಲ್ ಮತ್ತು ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರದ ತನಿಖೆಯನ್ನು ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಬೇಕು ಎಂದು ಸಾಗರ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
![ಸಿಗಂದೂರು ಲಾಂಚ್ ಬಳಿ ನಕಲಿ ಟೋಲ್ ರಶೀದಿ, ಸರ್ಕಾರದ ಹಣ ಗುಳಂ, ಎಸಿಬಿ ತನಿಖೆ ಸಾಧ್ಯತೆ 2 Prashanth GPS copy](https://shivamoggalive.com/wp-content/uploads/2019/09/Prashanth-GPS-copy.jpg)
ಸಿಗಂದೂರಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಶರಾವತಿ ಹಿನ್ನೀರು ಭಾಗದಲ್ಲಿ ಕಳಸವಳ್ಳಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತಿತ್ತು. ಇದರಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸರ್ಕಾರಕ್ಕೆ ಸೇರಬೇಕಾದ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಆಗಿದೆ ಎಂಬ ಆರೋಪವಿದೆ.
ಪ್ರಕರಣದ ತನಿಖೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿವೆ. ಅವರ ವಿರುದ್ಧವು ಪೊಲೀಸರು ಪ್ರಕರಣ ದಾಖಲಿಸುವ ಅವಕಾಶವಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಶಾಸಕ ಹರತಾಳು ಹಾಲಪ್ಪ ಸಭೆಯಲ್ಲಿ ತಿಳಿಸಿದರು.
ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು
ಇನ್ನು, ಕಳಸವಳ್ಳಿ ದಡದಲ್ಲಿ ನಕಲಿ ರಶೀದಿ ಮುದ್ರಿಸಿ ಪಾರ್ಕಿಂಗ್ ಶುಲ್ಕ ಮಸೂಲಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಬಿಜೆಪಿ ತುಮರಿ ಘಟಕ ಒತ್ತಾಯಿಸಿದೆ. ಈ ಸಂಬಂಧ ಶಾಸಕ ಹರತಾಳು ಹಾಲಪ್ಪ ಅವರಿಗೆ ಮನವಿ ಸಲ್ಲಿಸಿದೆ.
![ಸಿಗಂದೂರು ಲಾಂಚ್ ಬಳಿ ನಕಲಿ ಟೋಲ್ ರಶೀದಿ, ಸರ್ಕಾರದ ಹಣ ಗುಳಂ, ಎಸಿಬಿ ತನಿಖೆ ಸಾಧ್ಯತೆ 3 70314742 2398489713729119 8613244552041463808 n.jpg? nc cat=108& nc oc=AQkaEdL2qu13KvyGCqGMnnKJbI9nZS7AN6Lu5S8W Yxt 1LAkceB5qxFNnaUwW3ozb8nFGFOSVDZ3LVEHSEBvKck& nc ht=scontent.fixe1 1](https://scontent.fixe1-1.fna.fbcdn.net/v/t1.0-9/70314742_2398489713729119_8613244552041463808_n.jpg?_nc_cat=108&_nc_oc=AQkaEdL2qu13KvyGCqGMnnKJbI9nZS7AN6Lu5S8W_Yxt-1LAkceB5qxFNnaUwW3ozb8nFGFOSVDZ3LVEHSEBvKck&_nc_ht=scontent.fixe1-1.fna&oh=97b4fec86d94a61dae4a4b87613c1600&oe=5DFCDA5D)
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ಪ್ರಸನ್ನ ಕೆರೆಕೈ, ತುಮರಿ ಗ್ರಾಮ ಪಂಚಾಯಿತಿ ಸದಸ್ಯ ಲೋಕಪಾಲ್ ಜೈನ್, ಬಿ.ಟಿ.ರವೀಂದರ, ಗಿರೀಶ್ ಗೌಡ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಶಿವಮೊಗ್ಗ ಲೈವ್.ಕಾಂ