Use your ← → (arrow) keys to browse
ಶಿವಮೊಗ್ಗದಲ್ಲಿ ಬಂಟರ ಭವನ ಉದ್ಘಾಟನೆಗೆ ದಿನಾಂಕ ನಿಗದಿ
SHIMOGA : ನಗರ ಗೋಪಾಲಗೌಡ ಬಡಾವಣೆಯ ನೂರು ಅಡಿ ರಸ್ತೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಬಂಟರ ಭವನ ನಿರ್ಮಿಸಲಾಗಿದೆ. ಫೆ.10ರಂದು ಸಂಜೆ 4 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭವನವನ್ನು ಉದ್ಘಾಟಿಸಲಿದ್ದಾರೆ. ಭೋಜನಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಭಾ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ, ದಾನಿಗಳ ಫೋಟೊ ಗ್ಯಾಲರಿಯನ್ನು ಬೆಂಗಳೂರಿನ ಎಂಆರ್ಜಿ ಗ್ರೂಪ್ನ ಕೆ.ಪ್ರಕಾಶ್ ಶೆಟ್ಟಿ, ಆಡಳಿತ ಕಚೇರಿಯನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉದ್ಘಾಟಿಸಿದ್ದಾರೆ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಡಾ ಎ.ಸತೀಶ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ – ವಿದ್ಯುತ್ ದರ ಪರಿಷ್ಕರಣಕ್ಕೆ ಜನರಿಂದ ಅಭಿಪ್ರಾಯ ಸಂಗ್ರಹ | ನೀರಿನ ಕಂದಾಯಕ್ಕೆ ವಿಶೇಷ ಕೌಂಟರ್ – ಫಟಾಫಟ್ ನ್ಯೂಸ್
Use your ← → (arrow) keys to browse