ಶಿವಮೊಗ್ಗದ ಲೈವ್.ಕಾಂ | HOSANAGARA NEWS | 10 ಫೆಬ್ರವರಿ 2022
ಸಾರ್ವಜನಿಕ ಸ್ಥಳದಲ್ಲಿ ತಂದೆಯೇ ಮಗನಿಗೆ ಚಾಕುವಿನಿಂದ ಇರಿದ್ದಿದ್ದಾರೆ. ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ತೀರ್ಥೇಶ್ (33) ಗಾಯಗೊಂಡಿರುವವರು. ತಂದೆ ರಾಜಪ್ಪಗೌಡ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಹೊಸನಗರದ ಗೊರಗೋಡು ಗ್ರಾಮದಲ್ಲಿ ತೀರ್ಥೇಶ್ ಅವರು ಕೆಲಸದ ನಿಮಿತ್ತ ಹೊಸನಗರಕ್ಕೆ ಬಂದಿದ್ದರು. ಇಲ್ಲಿನ ಹೊಟೇಲ್ ಒಂದರಲ್ಲಿ ತೀರ್ಥಶ್ ಊಟ ಮಾಡುತ್ತಿದ್ದಾಗ ತಂದೆ ರಾಜಪ್ಪಗೌಡ ಬಂದು ಗಲಾಟೆ ಮಾಡಿದ್ದಾರೆ. ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಚಾಕು ತೆಗೆದು ತೀರ್ಥೇಶ್’ಗೆ ತಿವಿದಿದ್ದಾರೆ.
ಗಾಯಗೊಂಡಿದ್ದ ತೀರ್ಥೇಶ್ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shimoga District Profile | About Shivamogga Live | Shivamogga Live WhatsApp Number 7411700200