ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಡಿಸೆಂಬರ್ 2021
ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಾಲ್ವರು ಯುವಕರ ಮೇಲೆ ಜಯನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಹೊಸಮನೆಯ ನವೀನ್ (28), ಶಿಕಾರಿಪುರದ ಪ್ರದೀಪ್ (25), ಶಿಕಾರಿಪುರದ ಹಳಿಯೂರಿನ ಗಿರೀಶ್ (29), ಸೊರಬದ ಇಂಡಳ್ಳಿಯ ಬಸವರಾಜಪ್ಪ (48) ಬಂಧಿತರು.
ರೈಲ್ವ ನಿಲ್ದಾಣದ ಬಳಿ ಗಾಂಜಾ ಮಾರಾಟ
ಶನಿವಾರ ಮಧ್ಯಾಹ್ನ ಈ ನಾಲ್ವರು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ದಾಳಿ ನಡೆಸಿದ ಪೊಲೀಸರು 1 ಕೆ.ಜಿ 59 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 38 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಬಂಧಿತರಿಂದ ಐದು ಮೊಬೈಲ್ ಫೋನ್, 500 ರೂ. ನಗದು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಎನ್’ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.
ಶಿವಮೊಗ್ಗ ಲೈವ್. Com ಗೆ ಒಳಿತಾಗಲಿ. ಪ್ರಪಂಚದಾದ್ಯಂತ ಹರದಿರುವ “ಶಿಮೊಗಿಯ ನ್ಸ್” ಗೆ ಶಿವಮೊಗ್ಗದ ದೈನಂದಿನ ಆಗು ಹೋಗುಗಳು ಬೆಳಗಿನ ಚಳಿಯ,ಚುಮು ಚುಮು ಕಾಫಿಯೊಂದಿಗೆ ಮೂಡಕೊಡಲಿ