ಶಿವಮೊಗ್ಗ ಲೈವ್.ಕಾಂ | SHIMOGA NEWS | 10 APRIL 2021
ಗಾಂಜಾ ಸಾಗಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ತಲ್ವಾರ್ಗಳು ಪತ್ತೆಯಾಗಿವೆ. ತಲ್ವಾರ್, ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.
ತುಂಗಾ ನಗರ ಠಾಣೆ ಪೊಲೀಸರು ಟಿಪ್ಪುನಗರದಲ್ಲಿ ಕಾರ್ಯಾಚರಣೆ ನಡೆಸಿ, ಅಣ್ಣಾನಗರದ ಅಬ್ದುಲ್ ಮುನಾಫ್ (22), ಮಿಳಘಟ್ಟದ ಅಸಾದಿ ಅಲಿಯಾಸ್ ಅಸಾದುಲ್ಲಾ ಖಾನ್ (22), ಮಂಜುನಾಥ ಬಡಾವಣೆಯ ಮಹಮ್ಮದ್ ಅನಾಸ್ (18), ಟಿಪ್ಪುನಗರದ ಸಯ್ಯದ್ ಇಬ್ರತ್ ಖಾನ್ (19), ಸದಾತ್ ಇಮ್ತಿಯಾಜ್ (23) ಮತ್ತು ಗುಲಾಮ್ ನಾಜ್ (34) ಎಂಬುವವರನ್ನ ಬಂಧಿಸಲಾಗಿದೆ.
ಬಂಧಿತರಿಂದ ಒಂದು ಕೆ.ಜಿ.ಗಾಂಜಾ, ಮೂರು ತಲ್ವಾರ್, 2,585 ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ.
ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]