ಶಿವಮೊಗ್ಗ ಲೈವ್.ಕಾಂ | SHIMOGA NEWS | 8 NOVEMBER 2020
ಟಿಪ್ಪು ನಗರದಲ್ಲಿ ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದವರ ಮೇಲೆ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರನ್ನು ಬಂಧಿಸಿದ್ದು, ಗಾಂಜಾ ಮತ್ತು ಬೈಕನ್ನು ವಶಕ್ಕೆ ಪಡೆಯಲಾಗಿದೆ.
ಟಿಪ್ಪುನಗರದ ಅಯೂಬ್ ಖಾನ್ ಅಲಿಯಾಸ್ ಅಯೂಬ್ ಟ್ಯೂಬ್ (21), ಕೆಳಗಿನ ತುಂಗಾನಗರದ ಸಲ್ಮಾನ್ ಅಲಿಯಾಸ್ ನೇಪಾಳಿ ಸಲ್ಮಾನ್ (20) ಬಂಧಿತರು. ಟಿಪ್ಪುನಗರದಲ್ಲಿ ಇವರು ಗಾಂಜಾ ಮಾರುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತರಿಂದ 100 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. 80 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತುಂಗಾನಗರ ಠಾಣೆ ಪಿಎಸ್ಐ ತಿರುಮಲೇಶ್ ನೇತೃತ್ವದಲ್ಲಿ ಎಎಸ್ಐ ನಾರಾಯಣನ್, ಮುಖ್ಯ ಪೇದೆಗಳಾದ ಸಂತೋಷ್, ಸೈಯದ್ ಇಮ್ರಾನ್, ಕಾನ್ಸ್ಟೇಬಲ್ಗಳಾದ ಅರುಣ್, ಲಂಕೇಶ್, ಗುರುನಾಯ್ಕ್, ರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Congratulations Thirumalesh sir