SHIVAMOGGA LIVE NEWS | 4 ಏಪ್ರಿಲ್ 2022
ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಯುವಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಗೌತಮಪುರದಲ್ಲಿ ಘಟನೆ ಸಂಭವಿಸಿದೆ.
ಶಿಕಾರಿಪುರದ ಹಬೀಬ್ (35) ಬಂಧಿತ. ಈತ ಬೈಕಿನಲ್ಲಿ ಗೋಮಾಂಸ ತಂದು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗೌತಮಪುರದ ಯುಕವರು ಭಾನುವಾರ ಹಬೀಬ್’ನನ್ನು ತಡೆದು ವಾಹನ ಪರಿಶೀಲಿಸಿದಾಗ ಗೋಮಾಂಸ ಪತ್ತೆಯಾಗಿದೆ.
ಹಬೀಬ್’ನ ಬೈಕ್ ಸೈಡ್ ಬ್ಯಾಗಿನಲ್ಲಿ ಸುಮಾರು 6 ಕೆ.ಜಿಯಷ್ಟು ಗೋಮಾಂಸ ಪತ್ತೆಯಾಗಿದೆ. ಗೌತಮಪುರದ ಕೆಲವು ಮನೆಗಳಿಗೆ ಹಬೀಬ್ ಗೋಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಶಂಕೆ ಇದೆ.
ಗೌತಮಪುರದ ಯುವಕರೆ ಹಬೀಬನನ್ನು ಹಿಡಿದು ಸಾಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200