ಕನ್ನಡದ ಪೂಜಾರಿಗೆ ಸರ್ಕಾರದಿಂದ ಅವಮಾನ
ಶಿವಮೊಗ್ಗ : ಕನ್ನಡದ ಪೂಜಾರಿ ಎಂದು ಖ್ಯಾತರಾಗಿರುವ ಚಿಕ್ಕಮಗಳೂರಿನ ಕೋದಂಡರಾಮ ದೇವಸ್ಥಾನದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನ ಕಡಿತ ಮಾಡುವ ನೊಟೀಸ್ ನೀಡುವ ಮೂಲಕ ರಾಜ್ಯ ಸರ್ಕಾರ ಹುದ್ದು ಮೀರಿದೆ. ದೇಗುಲದ ಆದಾಯದಲ್ಲಿ ಕೊರತೆಯಾಗಿರುವುದಕ್ಕೆ ವೇತನವನ್ನು 7500ರ ಬದಲಿಗೆ 4500 ರೂ.ಗೆ ಇಳಿಸಿದೆ. ಕಳೆದ ಹತ್ತು ವರ್ಷದಲ್ಲಿ ಪಡೆದ ಹೆಚ್ಚಿನ ಸಂಬಳ 4.74 ಲಕ್ಷ ರೂ.ವನ್ನು ಸರ್ಕಾರಕ್ಕೆ ಮರು ಪಾವತಿಸಬೇಕು ಎಂದು ನೊಟೀಸ್ ನೀಡಿರುವುದು ಕನ್ನಡದ ಪೂಜಾರಿಗೆ ಮಾಡಿರುವ ಅವಮಾನ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ.