SHIVAMOGGA LIVE NEWS | 14 SEPTEMBER 2023
BENGALURU : ತೀವ್ರ ಮಳೆ ಕೊರತೆ ಹಿನ್ನೆಲೆ ರಾಜ್ಯ ಸರ್ಕಾರ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ, 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಘೋಷಿಸಿದೆ.
195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಸಚಿವ ಸಂಪುಟ ಉಪ ಸಮಿತಿ ಮುಖ್ಯಮಂತ್ರಿಗೆ ಶಿಫಾರಸು ಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ಸ್ಥಿತಿ ಏನು?
ತೀವ್ರ ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಹೆಸರು ಪ್ರಸ್ತಾಪಿಸಲಾಗಿದೆ. ಜಿಲ್ಲೆ ಏಳು ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಳೆ ಮಾಯ, ಭತ್ತ ನಾಟಿಗೆ ನೀರಿಲ್ಲ, ಹೊಲದಲ್ಲೆ ಒಣಗಿದ ಮೆಕ್ಕೆಜೋಳ, ಈ ಮಧ್ಯೆ ರೈತರಿಗೀಗ ಹೊಸ ಸಂಕಷ್ಟ
ಜಿಲ್ಲೆಯಲ್ಲಿ ಭತ್ತದ ಬೆಳೆಗೆ ನೀರಿಲ್ಲ. ಸಸಿಗಳು ಒಣಗಿ ನಾಟಿ ಮಾಡಲಾಗದ ಸ್ಥಿತಿ ಉಂಟಾಯಿತು. ಇನ್ನು, ಹೊಲದಲ್ಲಿಯೇ ಮೆಕ್ಕೆಜೋಳ ಒಣಗಿದೆ. ಮುಂದೆ ಅಡಿಕೆ ತೋಟಕ್ಕೆ ನೀರು ಹಾಯಿಸುವುದು ಹೇಗೆ ಎಂದು ಬೆಳೆಗಾರರು ಚಂತೆಗೀಡಾಗಿದ್ದಾರೆ. ಮುಂಗಾರು ಕೈ ಕೊಟ್ಟಿದ್ದರಿಂದ ಸಮಸ್ಯೆ ಜಲಾಶಯಗಳಲ್ಲಿಯು ನೀರಿನ ಕೊರತೆ ಉಂಟಾಗಿದೆ.