SHIVAMOGGA LIVE NEWS | 7 JANUARY 2024
THIRTHAHALLI : ಪ್ರತಿ ಗ್ರಾಮಗಳಲ್ಲು ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭ ಸರ್ಕಾರ ಕೂಸಿನಮನೆ ಯೋಜನೆ ಜಾರಿಗೊಳಿಸಿದೆ. ಇದು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಆರ್ಥಿಕವಾಗಿ ಹೊರೆಯಾಗಲಿದೆ ಎಂದು ತೀರ್ಥಹಳ್ಳಿ ತಾಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಟಿ.ಜೆ.ಅನಿಲ್ ತಿಳಿಸಿದ್ದಾರೆ.
ನರೇಗಾ ಯೋಜನೆ ಅಡಿ ಕೆಲಸ ಮಾಡುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷತೆ, ಪೌಷ್ಟಿಕ ಆಹಾರ ನೀಡಲು ಸಹಕಾರಿ ಆಗಲಿ ಎಂದು ಸರ್ಕಾರ ಕೂಸಿನ ಮನೆ ಯೋಜನೆ ಜಾರಿಗೆ ತಂದಿದೆ. ಆದರೆ ಈ ಯೋಜನೆಯಿಂದ ಪ್ರಯೋಜನ ಇಲ್ಲವಾಗಿದೆ. ಈ ಕಾರ್ಯಕ್ರಮದ ಕುರಿತು ಸರ್ಕಾರ ಮರು ಯೋಚಿಸುವ ಅಗತ್ಯವಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅನಿಲ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ – ಸಾಗರದ ಮಾರ್ಕೆಟ್ ರಸ್ತೆ ವಿಸ್ತರಣೆ, ಎಂಎಲ್ಎ, ಡಿಸಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ, ಜ.17ರಂದು ಮಹತ್ವದ ಸಭೆ
ನರೇಗಾ ಯೋಜನೆ ಅಡಿ ಅನೇಕ ಕಡೆ ಕೆಲಸ ನಡೆಯುತ್ತಿದೆ. ಆ ಸ್ಥಳಗಳಿಂದ ಕಾರ್ಮಿಕರ ಮಕ್ಕಳು ಏಕ ಸ್ಥಳದ ಕೂಸಿನ ಮನೆಗೆ ಸೇರಿಸುವುದು ಅಸಾಧ್ಯ. ಕೂಸಿನ ಮನೆಗಾಗಿ ಹಳೆ ಕಟ್ಟಡ ಬಳಸಬೇಕೋ, ಹೊಸ ಕಟ್ಟಡ ನಿರ್ಮಿಸಬೇಕೊ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಿಲ್ಲ. ಇದಕ್ಕೆ ಪ್ರತ್ಯೇಕ ಅನುದಾನವನ್ನು ನೀಡಿಲ್ಲ. ಆದ್ದರಿಂದ ಈ ಯೋಜನೆ ಗ್ರಾಮ ಪಂಚಾಯಿತಿಗಳಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ತಿಳಿಸಿದ್ದಾರೆ.