SHIVAMOGGA LIVE NEWS | 28 APRIL 2024
ANANDAPURA : ಕೆರೆ ಏರಿ ಮೇಲೆ ಜೆಸಿಬಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಸೈಯದ್ ಹುಸೇನ್ (34) ಮೃತರು. ಆನಂದಪುರದಿಂದ ಯಡೇಹಳ್ಳಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಕೆರೆ ಏರಿ ಮೇಲೆ ಬೈಕ್ ತೆರಳುತ್ತಿದ್ದಾಗ ಪಕ್ಕದ ಜಮೀನಿನಿಂದ ಜೆಸಿಬಿ ವಾಹನ ಏಕಾಏಕಿ ರಸ್ತೆಗೆ ಬಂದಿದೆ. ಈ ಸಂದರ್ಭ ಡಿಕ್ಕಿ ಸಂಭವಿಸಿ ಸೈಯದ್ ಹುಸೇನ್ ಗಂಭೀರ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು, ಮುಬಾರಕ್ ಎಂಬುವವರು ಗಾಯಗೊಂಡಿದ್ದು ಅವರಿಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ರಾತ್ರಿ ವಾಕಿಂಗ್ ತೆರಳಿದ್ದವರನ್ನು ಅಡ್ಡಗಟ್ಟಿದರು, ಬಿಯರ್ ಬಾಟಲಿಯಿಂದ ತಲೆಗೆ ಹೊಡೆದರು, ಇಬ್ಬರು ಆಸ್ಪತ್ರೆಗೆ ದಾಖಲು