ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019
ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಜೆಡಿಎಸ್ ಪಕ್ಷ ಫೈನಲ್ ಮಾಡಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಟೈಟ್ ಫೈಟ್ ನೀಡಿದ್ದ, ಮಧು ಬಂಗಾರಪ್ಪ ಅವರ ಹೆಸರನ್ನೇ ಅಂತಿಮಗೊಳಿಸಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೇ ಮಧು ಬಂಗಾರಪ್ಪ ಅವರ ಹೆಸರನ್ನು ಫೈನಲ್ ಮಾಡಿ, ಘೋಷಣೆಯನ್ನೂ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಧು ಬಂಗಾರಪ್ಪ ಅವರ ಮನೆಗೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಈ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಕಾಂಗ್ರೆಸ್’ನಲ್ಲಿ ಎಲ್ಲರೂ ಸೈಲೆಂಟ್
ಇನ್ನು, ರಾಜ್ಯದ್ಯಂತ ಮೈತ್ರಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ನಿರ್ಧರಿಸಿದೆ. ಈಗಾಗಲೇ ಸೀಟು ಹಂಚಿಕೆ ವಿಚಾರ ರಾಜ್ಯಮಟ್ಟದಲ್ಲಿ ಗೊಂದಲದ ಗೂಡಾಗಿದೆ. ಇಷ್ಟರ ನಡುವೆ, ಶಿವಮೊಗ್ಗದ ಜೆಡಿಎಸ್ ಅಭ್ಯರ್ಥಿಯನ್ನು ಷೋಷಣೆ ಮಾಡಲಾಗಿದೆ. ಇದು ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ತಂದಿದೆ. ಆದರೆ ಈ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಮುಖಂಡರಾರು ಬಹಿರಂಗವಾಗಿ ಹೇಳಿಕೆ ನೀಡಬಾರದು ಅಂತಾ ಮೌಖಿಕವಾಗಿ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
![ಬಿಜೆಪಿಗೂ ಮೊದಲೇ ಶಿವಮೊಗ್ಗ ಲೋಕಸಭೆಗೆ ಜೆಡಿಎಸ್ ಅಭ್ಯರ್ಥಿ ಹೆಸರು ಫೈನಲ್ , ಕಾಂಗ್ರೆಸ್ ಗಪ್’ಚುಪ್ 1 52893614 798051773889578 5459543318918594560 n.jpg? nc cat=105& nc eui2=AeGDb3VWJXOy2 AwL3YXntO2mkdFqTCCTX4JzAstpKjUj9FvVuhoCMk1HpCusSdBOS2SXsL PNIzU6SU924f3y6vr7Zwnmgt7Cu2HHrZKQP Rw& nc oc=AQnQrIJCsU78hcbpCBmDtgXlQEDmxac0ijEwgE3JgOjdOK49m0TnO XmKuGQ4u u9iw& nc ht=scontent.fblr3 2](https://scontent.fblr3-2.fna.fbcdn.net/v/t1.0-9/52893614_798051773889578_5459543318918594560_n.jpg?_nc_cat=105&_nc_eui2=AeGDb3VWJXOy2_AwL3YXntO2mkdFqTCCTX4JzAstpKjUj9FvVuhoCMk1HpCusSdBOS2SXsL_PNIzU6SU924f3y6vr7Zwnmgt7Cu2HHrZKQP_Rw&_nc_oc=AQnQrIJCsU78hcbpCBmDtgXlQEDmxac0ijEwgE3JgOjdOK49m0TnO_XmKuGQ4u_u9iw&_nc_ht=scontent.fblr3-2.fna&oh=7f8d6a60d9ba87527f52f3a879467a33&oe=5D1DC756)
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪ್ರಮುಖ ಮುಖಂಡರ ಸಭೆ ನಡೆಸಿದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಅಭ್ಯರ್ಥಿ ಆಯ್ಕೆ ವಿಚಾರವಾಗಿ ಗೊಂದಲ ಮೂಡಿಸುವ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಗೂ ಮೊದಲೇ ಅಭ್ಯರ್ಥಿ ಘೋಷಣೆ
ಉಪ ಚುನಾವಣೆ ಸಂದರ್ಭ, ಬಿಜೆಪಿ ಮೊದಲಿಗೇ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಆದರೆ ಈ ಬಾರಿ ಇನ್ನೂ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಬಿ.ವೈ.ರಾಘವೇಂದ್ರ ಅವರಿಗೆ ಟಿಕೆಟ್ ಬಹುತೇಕ ಕನ್’ಫರ್ಮ್ ಆಗಿದ್ದರೂ, ಈವರೆಗೂ ರಾಜ್ಯದ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗಿಲ್ಲ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
ಶಿವಮೊಗ್ಗ ಲೈವ್.ಕಾಂ