ಶಿವಮೊಗ್ಗ ಲೈವ್.ಕಾಂ |SHIMOGA NEWS | 9 NOVEMBER 2020
ಅನಾರೋಗ್ಯದಿಂದ ಮೃತಪಟ್ಟಿದ್ದ ಕಲಾವಿದರೊಬ್ಬರ ಕುಟುಂಬಕ್ಕೆ, ಶಿವಮೊಗ್ಗದ ಪತ್ರಕರ್ತರ ತಂಡವೊಂದು ನೆರವು ನೀಡಿದೆ. ಮನೆಗೆ ತೆರಳಿ ಸಾಂತ್ವನ ಹೇಳಿ ನೆರವು ಒದಗಿಸಿದ್ದಾರೆ.
ಶಿವಮೊಗ್ಗದ ಕಲಾವಿದ ಕಿಶೋರ್ ಇತ್ತೀಚೆಗೆ ಮೃತಪಟ್ಟಿದ್ದಾರೆ. ಈ ನೋವು ಮಾಸುವ ಮುನ್ನವೆ ಕಿಶೋರ್ ಅವರ ತಾಯಿ ಅಸುನೀಗಿದರು. ಹಾಗಾಗಿ ಅವರ ಕುಟುಂಬ ಆಘಾತಕ್ಕೀಡಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಶಿವಮೊಗ್ಗ ಮಲೆನಾಡು ಎಕ್ಸ್ಪ್ರೆಸ್ ವತಿಯಿಂದ ಧನ ಸಹಾಯಕ್ಕೆ ಮನವಿ ಮಾಡಲಾಗಿತ್ತು.
ಮೊದಲಿಗೆ 35,100 ರೂ. ಹಣ ಸಂಗ್ರಹಿಸಿ ಕಲಾವಿದ ಕಿಶೋರ್ ಅವರ ಕುಟುಂಬಕ್ಕೆ ನೀಡಲಾಯಿತು. ಬಳಿಕ ಪತ್ರಿಕೆ ವತಿಯಿಂದ 50 ಸಾವಿರ ರೂ. ನೆರವು ನೀಡಲಾಗಿದೆ. ಶಿವಮೊಗ್ಗ ಪತ್ರಿಕಾ ಭವನದ ಅಧ್ಯಕ್ಷ ಮಂಜುನಾಥ್ ಅವರು ಕಲಾವಿದ ಕಿಶೋರ್ ಕುಟುಂಬದವರಿಗೆ ನೆರವಿನ ಹಣ ಹಸ್ತಾಂತರಿಸಿದರು.
ಮಲೆನಾಡು ಎಕ್ಸ್ಪ್ರೆಸ್ ಸಂಪಾದಕ ಶಿ.ಜು.ಪಾಶ, ಪತ್ರಕರ್ತರಾದ ಸುಧೀರ್, ಪದ್ಮನಾಭ್, ವಸೀಂ ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]