SHIVAMOGGA LIVE NEWS |6 FEBRUARY 2023
‘ತವರು ಜಿಲ್ಲೆಯಲ್ಲಿ ನೀಡಿದ ಪ್ರಶಸ್ತಿ ವಿಶಿಷ್ಟ’
KUVEMPU RANGAMANDIRA : ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು ಲಭಿಸಿದೆ. ತವರು ನೆಲ ಶಿವಮೊಗ್ಗದಲ್ಲಿ ನೀಡಿರುವ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ವಿಶಿಷ್ಟವಾದದ್ದು. ಈ ಪ್ರಶಸ್ತಿಯನ್ನು (Award) ಹುಟ್ಟೂರು ಗೊಂಡೇನಹಳ್ಳಿಗೆ ಅರ್ಪಿಸುತ್ತೇನೆ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ನೀಡಲಾಯಿತು.
ಕೋಟೆ ದೇಗುಲದಲ್ಲಿ ಬ್ರಹ್ಮರಥೋತ್ಸವ
KOTE TEMPLE : ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಬ್ರಹ್ಮರಥೋತ್ಸವ ನಡೆಯಿತು. ದೇವಸ್ಥಾನದ ಮುಂಭಾಗದಿಂದ ರಥೋತ್ಸವ ನಡೆಯಿತು. ವಿವಿಧ ಕಲಾ ತಂಡಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ – ಗೋಪಾಳ ನಾಗರಿಕರು ಗರಂ | ಫೆ.8ರಂದು ಶಿವಮೊಗ್ಗಕ್ಕೆ ಸಿಎಂ | ನಗರದಲ್ಲಿ ತೈಪೂಸಂ ಉತ್ಸವ | ಸಿಟಿಯ 3 ಪ್ರಮುಖ ನ್ಯೂಸ್
ಶೇ.50ರಷ್ಟು ದಂಡದ ಜಾಗೃತಿ
ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಸಿದರೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಫೆ.11ರವರೆಗೆ ಈ ಅವಕಾಶ ಲಭ್ಯವಿದೆ. ರಾಜ್ಯ ಸರ್ಕಾರದ ಆದೇಶದ ಬೆನ್ನಿಗೆ ಶಿವಮೊಗ್ಗದ ಟ್ರಾಫಿಕ್ ಠಾಣೆ ಇನ್ಸ್ ಪೆಕ್ಟರ್ ಜಯಶ್ರೀ ಅವರು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಕರ್ನಾಟಕ ಸಂಘ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಇನ್ನು ನಗರದ ವಿವಿಧೆಡೆ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. (Award)
ಇದನ್ನೂ ಓದಿ – SHIMOGA JOBS | ಫೀಲ್ಡ್ ಸೇಲ್ಸ್, ನೀಟ್ ಅಕಾಡೆಮಿ ಮತ್ತು ಶಿವಮೊಗ್ಗ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ