SHIVAMOGGA LIVE NEWS | 16 OCTOBER 2023
SORABA : ಬ್ಲೇಡ್ ತುಂಡಾಗಿ ಕೆಎಸ್ಆರ್ಟಿಸಿ ಬಸ್ (KSRTC) ಗದ್ದೆಗೆ ನುಗ್ಗಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸೊರಬ ತಾಲೂಕು ಛದ್ರದಳ್ಳಿ ಬಸ್ ನಿಲ್ದಾಣದ ಸಮೀಪ ಭಾನುವಾರ ಘಟನೆ ಸಂಭವಿಸಿದೆ. ಬಸ್ಸಿನ ಮುಂಭಾಗದ ಬಲಬದಿಯ ಬ್ಲೇಡ್ ತುಂಡಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಗದ್ದೆಗೆ ಇಳಿದಿದೆ. ಕೆಎಸ್ಅರ್ಟಿಸಿ ಬಸ್ಸು ಹಿರೇಕೆರೂರಿನಿಂದ ಸೊರಬ ಮೂಲಕ ಶಿರಸಿಗೆ ತೆರಳುತ್ತಿತ್ತು. ಬಸ್ಸಿನಲ್ಲಿ 39 ಪ್ರಯಾಣಿಕರಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಫೈನಾನ್ಸ್ ಸಂಸ್ಥೆಯ ಬಾಗಿಲು ತೆಗೆದು ಒಳ ಹೋದ ಮ್ಯಾನೇಜರ್, ಸಿಬ್ಬಂದಿಗೆ ಕಾದಿತ್ತು ಶಾಕ್