SHIVAMOGGA LIVE NEWS | 14 DECEMBER 2022
ಶಿವಮೊಗ್ಗ : ಐರಾವತ ಬಸ್ಸಿನಲ್ಲಿ (airavata bus) ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಮೈಸೂರಿನಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬರುವಾಗ ಘಟನೆ ಸಂಭವಿಸಿದೆ.
ವಿನೋಬನಗರದ ಪ್ರಜ್ಞಲ್ ಎಂಬುವವರಿಗೆ ಸೇರಿದ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಪ್ರಜ್ವಲ್ ಅವರು ಮೈಸೂರಿನಿಂದ ಐರಾವತ (airavata bus) ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ರಾತ್ರಿ ಮೈಸೂರಿನಲ್ಲಿ ಬಸ್ ಹತ್ತಿದ್ದ ಅವರು ಬ್ಯಾಗ್ ಸಹಿತ ಲ್ಯಾಪ್ ಟಾಪನ್ನು ಲಗೇಜ್ ಕ್ಯಾರಿಯರ್ ಮೇಲೆ ಇಟ್ಟಿದ್ದರು.
ಬೆಳಗ್ಗೆ 5 ಗಂಟೆಗೆ ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಆಗಮಿಸಿದೆ. ಬಸ್ ಇಳಿಯುವ ಬ್ಯಾಗ್ ತೆಗೆದುಕೊಳ್ಳಲು ಲಗೇಜ್ ಕ್ಯಾರಿಯರ್ ನತ್ತ ಕಣ್ಣು ಹಾಯಿಸಿದಾಗ ಲ್ಯಾಪ್ ಟಾಪ್ ಬ್ಯಾಗ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ಬಳಿಕ ಪ್ರಜ್ವಲ್ ಅವರು ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಪ್ರಮುಖ ಬದಲಾವಣೆ ಸೂಚಿಸಿದ ಕೇಂದ್ರದ ಅಧಿಕಾರಿಗಳು, ಏನದು?
ತಮ್ಮ ಕಂಪನಿಗೆ ಸೇರಿದ ಆಪಲ್ ಮ್ಯಾಕ್ ಬುಕ್ ಪ್ರೋ ಲ್ಯಾಪ್ ಟಾಪ್ ಮತ್ತು ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.