SHIVAMOGGA LIVE NEWS | 22 NOVEMBER 2023
THIRTHAHALLI : ಕಮ್ಮರಡಿ ಸಮೀಪದ ಕೆಸಲೂರು ಗ್ರಾಮದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕೆಲಸೂರು ಸಮೀಪದ ಅಕೇಶಿಯ ನೆಡುತೋಪಿನಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಹಾಗಾಗಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ನಡೆದು ಹೋಗಲು ಮತ್ತು ತೋಟ, ಗದ್ದೆಗೆ ಹೋಗಲು ಜನರು ಭಯ ಪಡುತ್ತಿದ್ದಾರೆ. ಇನ್ನು, ಜಾನುವಾರುಗಳನ್ನು ಮೇಯಲು ಕೊಟ್ಟಿಗೆಯಿಂದ ಹೊರ ಬಿಡಲಾಗದೆ ಚಿಂತೆಗೀಡಾಗಿದ್ದಾರೆ.
ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಮಧುಕರ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ.
ಇದನ್ನೂ ಓದಿ – ಸದ್ಯದಲೇ ಶಿವಮೊಗ್ಗದಿಂದ ಮತ್ತಷ್ಟು ಮಾರ್ಗಕ್ಕೆ ವಿಮಾನಯಾನ, ಇಲ್ಲಿದೆ ಸಂಸದರು ಹೇಳಿದ 5 ಪ್ರಮುಖಾಂಶ