SHIVAMOGGA LIVE NEWS | 26 APRIL 2024
SHIMOGA : ಸಚಿವ ಸಂತೋಷ್ ಲಾಡ್ ಅವರಿಗೆ ಅವಹೇಳನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಮರಾಠ ಸಮುದಾಯ ಮತ್ತು ಅಹಿಂದ ಸಮಾಜದ ವತಿಯಿಂದ ಪಂಜು ಹಿಡಿದು ಪ್ರತಿಭಟನೆ ನಡೆಸಲಾಯಿತು. ನಗರದ ಗೋಪಿ ವೃತ್ತದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಬಿ.ವೈ.ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ತಂದೆಯ ಹೆಸರಿಟ್ಟುಕೊಂಡು ವಿಜಯೇಂದ್ರ ರಾಜಕಾರಣ ಮಾಡುತ್ತಿದ್ದಾರೆ. ಅವರು ಸಂತೋಷ್ ಲಾಡ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ವಿಜಯೇಂದ್ರಗೆ ನೈತಿಕತೆ ಇಲ್ಲ
ತಂದೆ ಯಡಿಯೂರಪ್ಪ ಅವರ ಹೆಸರು ಇಲ್ಲದಿದ್ದರೆ ವಿಜಯೇಂದ್ರ ಅವರಿಗೆ ರಾಜಕಾರಣದಲ್ಲಿ ಕಿಮ್ಮತ್ತಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಕುರಿತು ಮಾತನಾಡಲು ವಿಜಯೇಂದ್ರ ಅವರಿಗೆ ನೈತಿಕತೆ ಇಲ್ಲ. ಸಾವಿರಾರು ಬಡವರು, ವಿದ್ಯಾರ್ಥಿಗಳಿಗೆ ಸಂತೋಷ್ ಲಾಡ್ ನೆರವಾಗಿದ್ದಾರೆ. ಜನರೆ ಬಯಸಿ ಬೆಳೆಸಿದ ನಾಯಕ. ವಿಜಯೇಂದ್ರ ಅವರ ಟೀಕೆಗೆ ಶ್ರಮಿಕರು, ಬಡವರು, ವಿದ್ಯಾರ್ಥಿಗಳು ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮರಾಠ ಸಮಾಜದ ಮುಖಂಡ ಎಂ.ಪ್ರವೀಣ್ ಕುಮಾರ್ ಟೀಕಿಸಿದ್ದಾರೆ.
ಪ್ರತಿಭಟನೆಯಲ್ಲಿ ಮರಾಠ ಸಮುದಾಯದ ಪ್ರಮುಖರಾದ ಡಾ. ತಾನಾಜಿ ಸಚಿನ್ ರಾವ್ ಸಿಂದೆ, ಲೋಕೇಶ್ ರಾವ್, ದಿನೇಶ್ ರಾವ್, ಎಂ.ಬಿ.ಕವಿತಾ, ಕಿರಣ್ ಮೋರೆ, ಅಶೋಕ್ ರಾವ್ ಘೋರ್ಪಡೆ, ಪ್ರಶಾಂತ್ ರಾಯ್, ಜಿಎನ್ ಪರಶುರಾಮ್, ಪುನೀತ್ ರಾವ್, ಪುನೀತ್ ರಾವ್, ಅಹಿಂದ ಸಮಾಜಗಳ ಪ್ರಮುಖರಾದ ಹೆಚ್.ಸಿ.ಯೋಗೀಶ್, ರೇಖಾ ರಂಗನಾಥ್, ನಾಗರಾಜ್ ಕಂಕಾರಿ, ಚಂದ್ರಭೂಪಾಲ್, ಕೆ ರಂಗನಾಥ್, ಶರತ್, ಕಲೀಮ್ ಪಾಷಾ, ಎನ್.ಕೆ.ಶ್ಯಾಮಸುಂದರ್, ಶಿವಣ್ಣ , ಕುಮರೇಶ್, ಭಾಸ್ಕರ್, ಎಚ್ಪಿ ಗಿರೀಶ್ ವಿನಯ್ , ಲೋಕೇಶ್ , ಪವನ್ , ರಾಕೇಶ್, ಸುವರ್ಣ ನಾಗರಾಜ್ , ಸೌಗಂಧಿಕಾ , ಚಂದ್ರಕಲಾ, ಸ್ಟೆಲ್ಲಾ ಮಾರ್ಟಿನ್, ಸಂತೋಷ್ ಲಾಡ್ ಅಭಿಮಾನಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ – ಕೆಲಸ ಹುಡುಕ್ತಿರೋರೆ ಹುಷಾರ್, ಯಾಮಾರಿದ್ರೆ ಶಿವಮೊಗ್ಗದ ಮಹಿಳೆಗಾದ ಸ್ಥಿತಿ ನಿಮಗೂ ಫಿಕ್ಸ್