SHIVAMOGGA LIVE NEWS | 19 APRIL 2024
ELECTION NEWS : ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಕೆ ಸಂಬಂಧ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನ್ಯಾಯಾಲಯಕ್ಕೆ ಗುರುವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯವು ಬಿಜೆಪಿಗೆ ಶುಕ್ರವಾರಕ್ಕೆ ಗಡುವು ನೀಡಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರು ಮೋದಿ ಭಾವಚಿತ್ರವನ್ನು ಚುನಾವಣೆ ಪ್ರಚಾರಕ್ಕೆ ಬಳಸದಂತೆ ಸೋಮವಾರ ಶಿವಮೊಗ್ಗದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಸಿಜೆಎಂನಲ್ಲಿ ದಾವೆ ಹೂಡಿದ್ದರು. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಈಶ್ವರಪ್ಪ ಅವರಿಗೆ ಗುರುವಾರದವರೆಗೆ ಕಾಲವಕಾಶ ನೀಡಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾರಾಜಿಸಿದ ಕೇಸರಿ, ಹಸಿರು ಧ್ವಜಗಳು, ಮೊಳಗಿತು ರಾಘವೇಂದ್ರ ಪರ ಘೋಷಣೆ