SHIVAMOGGA LIVE NEWS | 27 NOVEMBER 2022
ಶಿವಮೊಗ್ಗ | ಸೋಗಾನೆಯಲ್ಲಿ ತಲೆ ಎತ್ತುತ್ತಿರುವ ವಿಮಾನ ನಿಲ್ದಾಣದಲ್ಲಿ ಕೆಲಸ ಖಾಲಿ ಇದೆ ಎಂದು ನಂಬಿಸಿ ವಂಚನೆ ಮಾಡುತ್ತಿರುವ ಕುರಿತು ಆಪಾದನೆಗಳು ಕೇಳಿ ಬಂದಿವೆ. ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವೇಳೆ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಪತ್ರಕರ್ತರು ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಆಗ ಸಂಸದ ರಾಘವೇಂದ್ರ ಹೇಳಿದ್ದೇನು. (shimoga airport jobs)
(shimoga airport jobs)
‘ಮೋಸ ಹೋಗಬೇಡಿ..’
‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೇಮಕಾತಿ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ವಿಮಾನ ನಿಲ್ದಾಣದ ಭದ್ರತೆಯ ಜವಾಬ್ದಾರಿಯನ್ನು ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (ಕೆಎಸ್ಐಎಸ್ಎಫ್) ವಹಿಸುವ ಸಾಧ್ಯತೆ ಇದೆ. ಉಳಿದ ಯಾವುದೆ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಯಾರೂ ಮೋಸ ಹೋಗಬೇಡಿ’ ಎಂದು ಸಂಸದ ಬಿ.ವೈ.ರಾಘವೇಂದ್ರ ಎಚ್ಚರಿಸಿದರು.
ALSO READ – ಸಿಗಂದೂರು ಬಳಿ ಶರಾವತಿ ಹೊಳೆಗೆ ಇಳಿದ ಖಾಸಗಿ ಬಸ್
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಲಾಗುತ್ತಿದೆ. ಕೆಲವು ಉದ್ಯೋಗಾಕಾಂಕ್ಷಿಗಳು ಹಣ ಕೊಡಲು ಸಿದ್ಧವಾಗಿದ್ದಾರೆ ಎಂದು ಪತ್ರಕರ್ತರು ಸಂಸದ ರಾಘವೇಂದ್ರ ಅವರ ಗಮನ ಸೆಳೆದರು.