ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 APRIL 2021
ನಗರದ ಕಲ್ಯಾಣ ಮಂಟಪಗಳಿಗೆ ಭದ್ರಾವತಿ ನಗರ ಸಭೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದುವೆ ಸಮಾರಂಭದಲ್ಲಿ ನಿಗದಿಗಿಂತಲೂ ಹೆಚ್ಚು ಜನ ಸೇರಿದ್ದರಿಂದ ದಂಡ ವಿಧಿಸಲಾಗಿದೆ.
ನಗರಸಭೆ ಆಯುಕ್ತ ಮನೋಹರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾವತಿ ನಗರದ ವಿವಿಧ ಕಲ್ಯಾಣ ಮಂಟಪಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು.
ಆರತಕ್ಷತೆ ನಡೆಯುವ ಸಂದರ್ಭ ಕಲ್ಯಾಣ ಮಂಟಪಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿದೆಯೇ, ನಿಗದಿತ ಸಂಖ್ಯೆಯ ಜನರು ಮಾತ್ರ ಮದುವೆ ಮನೆಯಲ್ಲಿದ್ದಾರಾ ಎಂದು ಪರಿಶೀಲಿಸಿದರು. ಕಲ್ಯಾಣ ಮಂಟಪದಲ್ಲಿದ್ದ ಜನರ ಲೆಕ್ಕ ಹಾಕಿದರು. ಈ ವೇಳೆ ಕಲ್ಯಾಣ ಮಂಟಪವೊಂದರಲ್ಲಿ ನಿಗದಿಗಿಂತಲೂ ಹೆಚ್ಚು ಜನ ಸೇರಿದ್ದರು. ಆದ್ದರಿಂದ ಐದು ಸಾವಿರ ದಂಡ ವಿಧಿಸಿ, ಪ್ರಕರಣದ ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]