ಇವತ್ತು ಸಂಜೆ ವೇಳೆಗೆ ಬ್ಯಾಂಕ್‌ ಖಾತೆಗೆ 25 ಲಕ್ಷ ರೂ. ಹಣ

BANGALORE NEWS, 24 SEPTEMBER 2024 : ಆತ್ಮಹತ್ಯೆ ಮಾಡಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 25 ಲಕ್ಷ (Lakh) ರೂ. ಸಹಾಯಧನ ಘೋಷಿಸಿದ್ದಾರೆ. ಇವತ್ತು ಸಂಜೆ ವೇಳೆಗೆ ಚಂದ್ರಶೇಖರನ್‌ ಪತ್ನಿ ಕವಿತಾ ಅವರ ಖಾತೆಗೆ ಹಣ ಜಮೆಯಾಗಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಕವಿತಾ ಮತ್ತು ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಇಂದು ಸಂಜೆ ವೇಳೆಗೆ ಹಣ ಜಮೆ

ಮೃತ ಅಧಿಕಾರಿ ಚಂದ್ರಶೇಖರನ್‌ ಅವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 25 ಲಕ್ಷ ರೂ. ಸಹಾಯಧನ ಬಿಡುಗಡೆಗೊಳಿಸಲಾಗಿದೆ. ಖಜಾನೆಗೆ ಬಿಲ್‌ ಕಳುಹಿಸಲಾಗಿದೆ. ಇಂದು ಸಂಜೆ 4.30ರ ಒಳಗೆ ಕವಿತಾ ಅವರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

chandrashekaran-family-meets-CM-Siddaramaiah

ಇನ್ನು, ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆಯ ನಿಯಮದಂತೆ 8.25 ಲಕ್ಷ ರೂ. ಮಂಜೂರು ಮಾಡಲಾಗಿದೆ. ಚಂದ್ರಶೇಖರನ್‌ ಅವರಿಗೆ ಪಾವತಿಸಬೇಕಾದ ವೇತನ, ರಜೆ ನಗದೀಕರಣಕ್ಕೆ ಸಂಬಂಧಿಸಿದ 1.41 ಲಕ್ಷ ರೂ. ಹಣವನ್ನು ಈಗಾಗಲೆ ಕವಿತಾ ಅವರ ಖಾತೆಗೆ ವರ್ಗಾಯಿಸಲಾಗಿದೆ. ಚಂದ್ರಶೇಖರನ್‌ ಅವರ ಪುತ್ರನಿಗೆ ಉದ್ಯೋಗ ನೀಡುವ ಕುರಿತು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಲಾಗಿದೆ.

chandrashekaran family meets CM Siddaramaiah

ಚಂದ್ರಶೇಖರನ್‌ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೆರವಾದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್‌‌, ಶಾಸಕ ಎಸ್‌.ಎನ್‌.ಚನ್ನಬಸಪ್ಪ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಸವಳಂಗ ರಸ್ತೆ ಮೇಲ್ಸೇತುವೆ ಗುಂಡಿಗಳು ಕೊನೆಗೂ ಬಂದ್‌ | IMPACT

chandrashekaran-family-meets-CM-Siddaramaiah

Leave a Comment