ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು (Camp) ಮೇ 3ರಿಂದ 9ರ ವರೆಗೆ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿನಡೆಯಲಿದೆ.
ಇದನ್ನೂ ಓದಿ » ಜೋಗ ಜಲಪಾತ, ಮೊದಲ ದಿನವೇ ಜಲಾಧಾರೆ ಕಣ್ತುಂಬಿಕೊಂಡ ನೂರಾರು ಜನ
ವೈವಿಧ್ಯಮಯ ಸಂಸ್ಕೃತಿ ಕ್ರಿಯಾಶೀಲತೆಯನ್ನು ಬಿಂಬಿಸಲಿರುವ ಶಿಬಿರದಲ್ಲಿ ಕರ್ನಾಟಕ ಅಲ್ಲದೆ ಪಾಂಡಿಚೇರಿ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ವಿಶ್ವವಿದ್ಯಾಲಯಗಳ 150 ಎನ್.ಎಸ್.ಎಸ್ ಸ್ವಯಂ ಸೇವಕರು, ಘಟಕದ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸುವರು. ‘ವಿಕಸಿತ ಭಾರತಕ್ಕಾಗಿ ಯುವ ಜನತೆ’ ಎನ್ನುವ ವಿಶೇಷ ಕಲ್ಪನೆಯಲ್ಲಿ ಶಿಬಿರ (Camp) ರೂಪಿಸಲಾಗಿದೆ.
ಶಿಬಿರವನ್ನು ಶಾಸಕ ಡಾ. ಧನಂಜಯ್ ಸರ್ಜಿ ಉದ್ಘಾಟಿಸುವರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸುವರು.
ಏಳು ದಿನಗಳ ಈ ಶಿಬಿರದಲ್ಲಿ ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನಡೆಯಲಿದೆ. ರೆಡ್ಕ್ರಾಸ್ನ ಡಾ. ವಿ.ಎಲ್.ಎಸ್.ಕುಮಾರ್, ದೀಕ್ಷಾ ನಾಯಕ್, ಡಾ.ಶ್ರೀಪತಿ, ಶರ್ಮಿಳಾ ರಾಮಕುಮಾರ್, ಆಮ್ಮ ರಾಮಚಂದ್ರ ಮೈಸೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಸಮಾರೋಪ ಭಾಷಣವನ್ನು ಗಾಂಧಿವಾದಿ ಪ್ರೊ. ಜಿ.ಬಿ.ಶಿವರಾಜು ನೆರವೇರಿಸುವರು ಎಂದು ಕುವೆಂಪು ವಿವಿ ಎನ್ಎಸ್ ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200