ಶಿವಮೊಗ್ಗದ ರೈತರಿಗೆ ಮಳೆ ಕಂಟಕ, ಈ ಭಾರಿ ಭತ್ತ, ಜೋಳದ ಬೆಳೆ ಕೈ ತಪ್ಪುತ್ತಾ? ಹೇಗಿದೆ ಪರಿಸ್ಥಿತಿ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ನವೆಂಬರ್ 2021

ನಿರಂತರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಯ್ಲಿಗೆ ಬಂದಿರುವ ಭತ್ತ, ಜೋಳದ ಬೆಳೆ ಕೈ ತಪ್ಪುವ ಆತಂಕ ಎದುರಾಗಿದೆ. ಇದೆ ರೀತಿ ಮಳೆ ಮುಂದುವರೆದರೆ ಈ ಭಾರಿ ಜಿಲ್ಲೆಯ ದೊಡ್ಡ ಸಂಖ್ಯೆಯ ರೈತರು ಸಂಪೂರ್ಣ ಬೆಳೆ ಕಳೆದುಕೊಳ್ಳುವ ಸಾಧ್ಯತೆ ಇದೆ.

AVvXsEhukSpxMutW2NK9VKGYCJZbo5D pjw3GRDkWyD3QT v 5zYVwEgeYE3aEDsovr8qrBA UQyz9AQDDex3S4rTo4az0PahRQVwBlAZyMtGiVPmjIGkU LSlNTwwcQIsaKN5pfZRF1fn83VRNvDL6sSTDmd1NurZc7

ಆರು ತಿಂಗಳಿಂದ ಬಂಡವಾಳ ಹಾಕಿ, ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತರು, ಈ ಭಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಈಗ ಕೊಯ್ಲು ಮಾಡುವ ಸಮಯ ಬಂದಿದೆ. ಆದರೆ ನಿರಂತರ ಮಳೆಯಿಂದಾಗಿ ಗದ್ದೆಗಿಳಿಯುವುದೆ ಕಷ್ಟವಾಗಿದೆ.

ಶಿವಮೊಗ್ಗ ಜಿಲ್ಲೆಯ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.

ನೆಲಕ್ಕೊರಗಿದ ಭತ್ತ, ಜೋಳದ ಬೆಳೆ

ನಿರಂತರ ಮಳೆಯಿಂದಾಗಿ ಹೊಲದಲ್ಲಿ ತೇವಾಂಶವಿದೆ. ಗದ್ದೆಯಲ್ಲಿ ನೀರು ನಿಂತಿರುವುದರಿಂದ ಕೊಯ್ಲು ಯಂತ್ರಗಳನ್ನು ಇಳಿಸುವುದು ಕಷ್ಟವಾಗಲಿದೆ. ಒಂದು ವೇಳೆ ಕೂಲಿ ಕಾರ್ಮಿಕರನ್ನು ಬಳಸಿ ಕೊಯ್ಲು ಮಾಡಿದರೂ ಬೆಳೆಯನ್ನು ಒಣಗಿಸುವುದು ಸವಾಲಾಗಿದೆ. ಹಾಗಾಗಿ ಭತ್ತ, ಮೆಕ್ಕೆಜೋಳದ ಬೆಳೆ ನೆಲಕ್ಕೊರಗಿವೆ.

ಬಿಸಿಲು ನೆಲ ಮುಟ್ಟಬೇಕು

ಬೆಳೆ ಕೊಯ್ಲು ಮಾಡಿದರೂ ಅದನ್ನು ಒಣಗಿಸಬೇಕು. ನಿರಂತರ ಮೋಡ, ಮಳೆಯಿಂದಾಗಿ ಬಿಸಿಲು ನೆಲ ಮುಟ್ಟುತ್ತಿಲ್ಲ. ಈ ಸಂದರ್ಭದಲ್ಲಿ ಬೆಳೆ ಒಣಗಿಸುವುದು ಅತಿದೊಡ್ಡ ಸವಾಲಾಗಿದೆ. ಒಂದು ವೇಳೆ ಬೆಳೆಯನ್ನು ಸರಿಯಾಗಿ ಒಣಗಿಸದೆ ಇದ್ದರೆ ಕಾಳು ಬಣ್ಣ ಕಳೆದುಕೊಂಡು, ಮುಗ್ಗಲು ಹಿಡಿಯಲಿದೆ.

shivamogga live subscirbe contact

ಪರಿಹಾರಕ್ಕೆ ಹೆಚ್ಚಿದ ಆಗ್ರಹ

ಅಕ್ಟೋಬರ್ ಮೊದಲ ವಾರದಿಂದ ಶುರುವಾದ ಮಳೆ ಚಳಿಗಾಲ ಆರಂಭವಾದರೂ ನಿರಂತರವಾಗಿ ಸುರಿಯುತ್ತಿದೆ. ಇನ್ನಷ್ಟು ದಿನ ಮಳೆ ಸುರಿದರೆ ಬೆಳೆ ನಷ್ಟ ನಿಶ್ಚಿತ. ಹಾಗಾಗಿ ಪರಿಹಾರ ನೀಡಬೇಕು ಎಂದು ರೈತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇನ್ನೂ ಒಂದು ವಾರ ಮಳೆ ಆತಂಕ

ರಾಜ್ಯಾದ್ಯಂತ ಇನ್ನೂ ಒಂದು ವಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ರೈತರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ. ಮಳೆ ಇದೆ ರೀತಿ ಮುಂದುವರೆದರೆ ಕೊಯ್ಲು ಮತ್ತು ಒಕ್ಕಲು ಮಾಡುವುದು ಕಷ್ಟಕರ. ಬೆಳೆ ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ. ಇದು ರೈತರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment