ಬೆಂಗಳೂರು: ಸರ್ಕಾರಿ ವಾಹನವನ್ನು (Vehicle) ಸ್ವಂತಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆ ಆರ್ಟಿಒದ ಪ್ರಭಾರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತರು ನೊಟೀಸ್ ಜಾರಿ ಮಾಡಿದ್ದಾರೆ.
2024ರ ಸೆಪ್ಟೆಂಬರ್ನಿಂದ 2025ರ ಮಾರ್ಚ್ವರೆಗೆ ತರೀಕೆರೆ ಎಆರ್ಟಿಒ ವಾಹನವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಈ ಹಿನ್ನೆಲೆ ಆರ್ಟಿಒ ಕೇಂದ್ರ ಕಚೇರಿಯ ಅಪರ ಸಾರಿಗೆ ಅಯುಕ್ತರ ಸೂಚನೆ ಮೇರೆ ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತರು ನೊಟೀಸ್ ಜಾರಿ ಮಾಡಿದ್ದಾರೆ.
ಜೂ.17ರಂದು ಬೆಳಗ್ಗೆ 11.30ಕ್ಕೆ ವಿಚಾರಣೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ » ರಾಜ್ಯದ ಬಹು ಜಿಲ್ಲೆಗಳಿಗೆ ಇವತ್ತು ಯಲ್ಲೋ ಅಲರ್ಟ್, ಇವತ್ತಿನಿಂದ ಜೋರು ಗಾಳಿ ಸಹಿತ ಮಳೆ ಅಬ್ಬರ




