ಸೊರಬದಲ್ಲಿ ಕೃಷಿ ಭವನಕ್ಕೆ ಭೂಮಿ ಪೂಜೆ, ಏನಂದ್ರು ಮಿನಿಸ್ಟರ್?

Published On : ಏಪ್ರಿಲ್ 8, 2026

Published By : ನಿತಿನ್‌ ಆರ್‌.ಕೈದೊಟ್ಲು 

ಸೊರಬ: ಆಶ್ರಯ ಬಡಾವಣೆಯಲ್ಲಿ ಕೃಷಿಕ ಸಮಾಜದ ಭವನ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಭೂಮಿ ಪೂಜೆ (Bhoomi Puja) ನೆರವೇರಿಸಿದರು. ನಂತರ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಮಿನಿಸ್ಟರ್‌ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

1 ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೃಷಿ ಭವನ ನಿರ್ಮಾಣ ಮಾಡಬೇಕಿದೆ. ರೈತರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು.

2 ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದರಿಂದ ರೈತ ಸಮುದಾಯ ಆರ್ಥಿಕವಾಗಿ ಬಲಿಷ್ಠವಾಗಿದೆ. ಅನ್ನ ನೀಡುವ ರೈತ ವರ್ಗವನ್ನು ಸ್ಮರಿಸುವ ನಿಟ್ಟಿನಲ್ಲಿ ಕೃಷಿ ಭವನ ನಿರ್ಮಾಣ ಮಾಡುತ್ತಿರುವುದು ಸೂಕ್ತವಾಗಿದೆ.

080426-Foundation-Stone-for-Soraba-Raitha-Bhavana-by-Minister-Madhu-Bangarappa.avif
ಆಶ್ರಯ ಬಡಾವಣೆ ಸಮೀಪ 1.5 ಹೆಕ್ಟೇರ್ ಜಮೀನು ಕೃಷಿಕ ಸಮಾಜದ ಹೆಸರಿಗೆ ಮಂಜೂರಾಗಿದೆ. ರಾಜ್ಯ ಘಟಕದಿಂದ ₹22.5 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಮೊದಲ ಹಂತದಲ್ಲಿ ಕಟ್ಟಡ ನಿರ್ಮಾಣಕ್ಕೆ ₹7.5 ಲಕ್ಷ ಅನುದಾನ ಬಿಡುಗಡೆಯಾಗಿದೆ.- ಕೆ.ಜಿ.ಕುಮಾರ್, ಕೃಷಿ ಇಲಾಖೆಯ ಸಹಾಯಕ ಅಧಿಕಾರಿ

ಇದನ್ನೂ ಓದಿ : ಮಾಜಿ ಸಿಎಂ ಬಂಗಾರಪ್ಪ ಓದಿದ ಶಾಲೆಗೆ ಮಧು ಬಂಗಾರಪ್ಪ ಭೇಟಿ

ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎನ್. ನಾಗರಾಜ್, ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಟಿ.ಬಿ. ಸುರೇಶ್, ಪ್ರಧಾನ ಕಾರ್ಯದರ್ಶಿ ಶಾಂತಮ್ಮ ಜಯಮಾಲಾ, ವಿರೂಪಾಕ್ಷ, ಅಣ್ಣಪ್ಪ, ಶ್ರೀಧ‌ರ್, ದಯಾನಂದಗೌಡ, ಚಿಕ್ಕಸವಿ ನಾಗರಾಜ್, ಕೆ.ಪಿ.ರುದ್ರೇಗೌಡ, ತಹಶೀಲ್ದಾರ್ ಪುರಂದರ, ಗಂಗಾಧರಗೌಡ, ಶಿವಕುಮಾರ್, ಗಣಪತಿ ಹುಲ್ತಿಕೊಪ್ಪ, ಶಶಿಕಾಂತಗೌಡ, ಉಮೇಶ್ ಪಾಟೀಲ್, ರೇವಣಪ್ಪ ಸೇರಿದಂತೆ ಇತರರಿದ್ದರು.‌

ಇದನ್ನೂ ಓದಿ : ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 8, 2026

Leave a Comment