ಶಿವಮೊಗ್ಗದಲ್ಲಿ ಧಗಧಗ ಹೊತ್ತಿ ಉರಿದ ಟಿಂಬರ್‌, ತಪ್ಪಿದ ಭಾರಿ ದುರಂತ, ಆಗಿದ್ದೇನು?

Published On : ಏಪ್ರಿಲ್ 9, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಗರದ ಮಂಡ್ಲಿಯಲ್ಲಿರುವ 110/11 ಕೆವಿ ಸಬ್‌ ಸ್ಟೇಷನ್ ಪಕ್ಕದಲ್ಲಿರುವ ಸಾಮಿಲ್‌ನಲ್ಲಿ ಬುಧವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು (disaster) ಆತಂಕ ಸೃಷ್ಟಿಸಿತ್ತು. ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಸಾಮಿಲ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮರದ ದಿಮ್ಮಿಗಳಿಗೆ ವ್ಯಾಪಿಸಿತು. ಸಬ್‌ ಸ್ಟೇಷನ್‌ಗೆ ತೀರಾ ಹತ್ತಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಕ್ಷಣವೇ ಫೀಡರ್‌ಗಳನ್ನು ಬಂದ್ ಮಾಡಲಾಯಿತು. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಇದನ್ನೂ ಓದಿ : ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

ಸಾಮಿಲ್ ಒಳಗೆ ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಸೂಕ್ತ ಮಾರ್ಗವಿಲ್ಲದ ಕಾರಣ, ಸಿಬ್ಬಂದಿಯು ಸಬ್‌ ಸ್ಟೇಷನ್ ಆವರಣದ ಮೂಲಕವೇ ಕಾರ್ಯಾಚರಣೆ ನಡೆಸಬೇಕಾಯಿತು. ಐದು ಅಗ್ನಿಶಾಮಕ ವಾಹನ ಸುಮಾರು ಎರಡೂವರೆ ಗಂಟೆ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದವು. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

Renuka-Saw-Mill-incident-at-mandli-in-Shimoga

ಅಗ್ನಿಶಾಮಕ ದಳದ ಆರ್‌ಎಫ್‌ಒ ರಾಜು, ಡಿಎಫ್‌ಒ ಅಶೋಕ್ ಕುಮಾರ್‌, ಎಫ್‌ಎಸ್‌ಒ ಮಕ್ತುಮ್ ಹುಸೇನ್, ಎಲ್‌ಎಫ್‌ ಸುನಿಲ್‌, ಎಫ್‌ಡಿ ಸತೀಶ್, ಗಣೇಶ್, ಸಂಗಮೇಶ್, ರಮೇಶ್, ನಾಗರಾಜ್, ಎಫ್‌ಎಂ ವೆಂಕಟೇಶ್, ಇರಿ ಸ್ವಾಮಿ, ಮಾರುತಿ, ಯಶವಂತ, ವಿಜಯ್, ಮಹಮ್ಮದ್ ಹುಸೇನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Renuka-Saw-Mill-incident-at-mandli-in-Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 9, 2026

Leave a Comment