ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ರಾತ್ರಿ ಇಡೀ ಸುರಿದ ಮಳೆ, ಎಲ್ಲೆಲ್ಲಿ ಹೇಗಿತ್ತು ವರುಣಾರ್ಭಟ? ಕೆಲ ಶಾಲೆಗಳಿಗೆ ರಜೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 21 JULY 2023

SHIMOGA : ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಹೆಚ್ಚಳವಾಗಿದೆ. ಕೆರೆ ಕೊಳ್ಳಗಳು, ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಈ ನಡುವೆ ವಿವಿಧೆಡೆ ಮಳೆಯಿಂದ ಹಾನಿ ಸಂಭವಿಸಿದೆ. ಜೋರು ಮಳೆಯ ಹಿನ್ನೆಲೆ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Parishrama Neet Academy

ತೀರ್ಥಹಳ್ಳಿ, ಸಾಗರ, ಹೊಸನಗರ ಮತ್ತು ಸೊರಬ ತಾಲೂಕಿನ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶಗಳ ಪೈಕಿ ಹೊಸನಗರದ ಸೋನಲೆ ಸೇರಿದೆ.

ರಾತ್ರಿ ಅಬ್ಬರಿಸಿದ ವರುಣ

ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಮಳೆ ಅಬ್ಬರ ಜೋರಾಗಿತ್ತು. ತೀರ್ಥಹಳ್ಳಿಯ ಹೊಸಹಳ್ಳಿ, ನೆರಟೂರು, ಕುಡುಮಲ್ಲಿಗೆ, ತ್ರಯಂಬಕಪುರ, ದೇಮ್ಲಾಪುರ, ಹಾದಿಗಲ್ಲು, ನೊಣಬೂರು, ಆರಗ, ಬಿದರಗೋಡು, ತೀರ್ಥ ಮತ್ತೂರು, ಮಾಳೂರು, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ಹೊಸನಗರದ ಸೋನಲೆ, ತ್ರಿಣಿವೆ, ನಗರ, ಹೊಸೂರು ಸಂಪೆಕಟ್ಟೆ, ಅಮೃತ, ಮುಂಬಾರು, ಮೇಲಿನ ಬೆಸಿಗೆ, ಸಾಗರದ ಕಾಂಡಿಕೆ, ಸಿರಿವಂತೆ, ಹಿರೆಬಿಲಗುಂಜಿ, ತ್ಯಾಗರ್ತಿ, ಭೀಮನೇರಿ, ಕಾನ್ಲೆ, ಸೊರಬದ ಹರೀಶಿ, ಹೊಸಬಾಳೆ, ತಲ್ಲೂರು ಭಾಗದಲ್ಲಿ ಮಳೆ ಜೋರಿತ್ತು ಎಂದು ತಿಳಿದು ಬಂದಿದೆ.

Heavy-Rainfall-in-various-parts-of-Shimoga

PHOTO : ಸೊರಬ ತಾಲೂಕು ಹಾಲಗಳಲೆ ಸಮೀಪ ಧರೆಗುರುಳಿದ ಮರ, ತುಂಡಾದ ವಿದ್ಯುತ್‌ ಕಂಬ


ಕೆರೆ, ಕೊಳ್ಳ, ಜಲಾಶಯದ ಮಟ್ಟ ಹೆಚ್ಚಳ

ಆರಂಭದಲ್ಲಿ ಮುಂಗಾರು ನೀರಸವಾಗಿದ್ದರಿಂದ ಈ ಬಾರಿ ಕೆರೆ, ಕೊಳ್ಳ, ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ಮೂಡಿತ್ತು. ಆದರೆ ಈ ವಾರದಲ್ಲಿ ಮಳೆ ಬಿರುಸು ಪಡೆದಿದ್ದು, ಕೆರೆ, ಕೊಳ್ಳ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಏರಿಕೆಯಾಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ತುಂಗಾ, ಭದ್ರಾ ಜಲಾಶಯಗಳಿಗೆ ನೀರಿನ ಒಳ ಹರಿವು ಏರಿಕೆಯಾಗುತ್ತಿರುವುದು ಬಳ್ಳಾರಿ, ರಾಯಚೂರು, ತೆಲಂಗಾಣ ರಾಜ್ಯದ ರೈತರು ನಿಟ್ಟುಸಿರು ಬಿಡುವ ಹಾಗೆ ಮಾಡಿದೆ.

ಇದನ್ನೂ ಓದಿ – ತುಂಗಾ ಡ್ಯಾಂನ ಗೇಟ್‌ಗಳು ಮತ್ತೆ ಓಪನ್‌, ನಿನ್ನೆ ಎಲ್ಲ ಗೇಟ್‌ ಮೇಲೆತ್ತಲಾಗಿತ್ತು, ಇವತ್ತು ಹೊರ ಹರಿವು ಎಷ್ಟಿದೆ?

ಅಲ್ಲಲ್ಲಿ ಮಳೆ ಹಾನಿ, ಶಾಲೆಗೆ ರಜೆ

ಜೋರು ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ವಿವಿಧೆಡೆ ಮರಗಳು ಧರೆಗುರುಳಿವೆ. ವಿದ್ಯುತ್‌ ಕಂಬಗಳು ತುಂಡಾಗಿ ಗ್ರಾಮಗಳ ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಮನೆಗಳ ಗೋಡೆ ಕುಸಿತ, ಛಾವಣಿ ಹಾನಿ, ಅಲ್ಲಲ್ಲಿ ನೀರು ನಿಂತಿರುವ ಕುರಿತು ವರದಿಯಾಗಿದೆ. ಇನ್ನು ಮಳೆ ಹೆಚ್ಚಾದರೆ ಶಾಲೆಗಳಿಗೆ ರಾಜೆ ಘೋಷಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಮತ್ತು ಸ್ಥಳೀಯ ಮುಖಂಡರಿಗೆ ವಹಿಸಲಾಗಿದೆ. ಈ ಹಿನ್ನೆಲೆ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದಷ್ಟು ಮಳೆಯಾದರೆ ಸ್ಥಳೀಯವಾಗಿ ನಿರ್ಧಾರ ಕೈಗೊಂಡು ವಿವಿಧೆಡೆ ರಜೆ ಘೋಷಿಸಲಾಗಿದೆ.

ಮಳೆ ಉತ್ತಮವಾಗಿದ್ದು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಬಿತ್ತನೆ ಕಾರ್ಯ ಜೋರಾಗಿದೆ.

Ready compound in Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment