ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಇಂದು ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ವಿವಿಧ ಪೊಲೀಸ್, ಶಾಲಾ-ಕಾಲೇಜು ಹಾಗೂ ವಿವಿಧ ಸ್ಕ್ವಾಡ್ಗಳ ಒಟ್ಟು 26 ತುಕಡಿಗಳು ಪಾಲ್ಗೊಂಡಿದ್ದವು (Shivamogga parade). ಪ್ರೊಬೆಷನರಿ ಐಪಿಎಸ್ ಐಧಿಕಾರಿ ಮೇಘಾ ಅಗರ್ವಾಲ್ ಪಥಸಂಚಲನದ ಮುಖ್ಯ ದಂಡನಾಯಕರಾಗಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಪಥಸಂಚಲನ ಮುನ್ನಡೆಸಿದ ಮಹಿಳಾ ಐಪಿಎಸ್ ಅಧಿಕಾರಿ, ಗಮನ ಸೆಳೆದ ಕನ್ನಡದ ಕಮಾಂಡ್
ಯಾವೆಲ್ಲ ತುಕಡಿಗಳಿದ್ದವು?
ಆರ್.ಎಸ್.ಐ. ಹನುಮರೆಡ್ಡಿ ನೇತೃತ್ವದಲ್ಲಿ ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ. 08 ನೇ ಪಡೆ, ಆರ್.ಎಸ್.ಐ. ರಾಘವೇಂದ್ರ ಎಸ್. ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪಿ.ಎಸ್.ಐ. ಗಾದೆಲಿಂಗಪ್ಪಗೌಡರ್ ನೇತೃತ್ವದಲ್ಲಿ ಸಿವಿಲ್ ಪೊಲೀಸ್ ತುಕಡಿ, ಎಂ.ಎಸ್.ಐ. ಹೇಮಲತಾ ನೇತೃತ್ವದಲ್ಲಿ ಮಹಿಳಾ ಪೊಲೀಸ್ ತುಕಡಿ, ಪಿ.ಎಸ್.ಐ. ಸಚಿನ್ ಕೆ.ಹೆಚ್. ನೇತೃತ್ವದಲ್ಲಿ ಕೆ.ಎಸ್.ಐ.ಎಸ್.ಎಫ್. 2 ನೇ ಪಡೆ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಇದೇ ಮೊದಲ ಬಾರಿ ಕೆಎಸ್ಐಎಸ್ಎಫ್ ತುಕಡಿ ಶಿವಮೊಗ್ಗದ ಪಥ ಸಂಚಲನದಲ್ಲಿ ಪಾಲ್ಗೊಂಡಿತ್ತು.

ಶಿವಾನಂದಪ್ಪ ಬಿ.ಇ. ನೇತೃತ್ವದಲ್ಲಿ ಗೃಹರಕ್ಷಕ ದಳದ ಪುರುಷರ ತುಕಡಿ, ಅರುಣಾ ಮೇರಿ ನೇತೃತ್ವದಲ್ಲಿ ಗೃಹರಕ್ಷಕ ದಳದ ಮಹಿಳಾ ತುಕಡಿ, ಕೆ. ಪ್ರಭು (ಗಸ್ತು ಅರಣ್ಯ ಪಾಲಕ) ನೇತೃತ್ವದಲ್ಲಿ ಅರಣ್ಯ ಇಲಾಖೆ ತುಕಡಿ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ, ಕೆಎಸ್ಆರ್ಪಿಯ ಪೊಲೀಸ್ ಬ್ಯಾಂಡ್ ತಂಡಗಳು ಪಥಸಂಚಲನಲ್ಲಿ ಪಾಲ್ಗೊಂಡಿದ್ದವು.

ಪಥ ಸಂಚಲನದಲ್ಲಿ ವಿದ್ಯಾರ್ಥಿಗಳು
ಯಶಸ್ವಿನಿ ಆರ್. ನೇತೃತ್ವದಲ್ಲಿ ಎನ್.ಸಿ.ಸಿ (ಜೂನಿಯರ್ ವಿಂಗ್) ಕಸ್ತೂರ ಬಾ ಪ್ರೌಢಶಾಲೆ ಬಾಲಕಿಯರು, ಸುರೇಶ ನೇತೃತ್ವದಲ್ಲಿ ಪೌರ ಕಾರ್ಮಿಕರು, ಪ್ರಥಮ ಬಿ.ಎಸ್. ನೇತೃತ್ವದಲ್ಲಿ ಜವಾಹರ್ ನವೋದಯ ವಿದ್ಯಾಲಯ ಬಾಲಕರು. ಜೀವಿತ ಬಿ. ನೇತೃತ್ವದಲ್ಲಿ ಜವಾಹರ್ ನವೋದಯ ವಿದ್ಯಾಲಯ ಬಾಲಕಿಯರು (ಗಾಜನೂರು), ಸಾಯಿಸರಣ್ ನೇತೃತ್ವದಲ್ಲಿ ಸಾಂದೀಪನಿ ಆಂಗ್ಲ ಪ್ರೌಢಶಾಲೆ ಬಾಲಕರು.

ಅಭಿಜ್ಞಾ ಎಂ. ನೇತೃತ್ವದಲ್ಲಿ ಸಾಂದೀಪನಿ ಆಂಗ್ಲ ಪ್ರೌಢಶಾಲೆ ಬಾಲಕಿಯರು, ಲಿಪಿಕಾ ಎಸ್. ನೇತೃತ್ವದಲ್ಲಿ ಪ್ರಿಯದರ್ಶಿನಿ ಆಂಗ್ಲ ಪ್ರೌಢಶಾಲೆ ಬಾಲಕಿಯರು, ಪೊನ್ನಯ ವೈ. ನೇತೃತ್ವದಲ್ಲಿ ಮೇರಿ ಇಮ್ಯಾಕ್ಯುಲೇಟ್ ಬಾಲಿಕಾ ಪ್ರೌಢಶಾಲೆ, ಚೇತನ್ ಆರ್. ನೇತೃತ್ವದಲ್ಲಿ ಪಿ.ಇ.ಎಸ್. ಪಬ್ಲಿಕ್ ಶಾಲೆ ಬಾಲಕರು, ಮಹಮ್ಮದ್ ಸಲೀಮ್ ನೇತೃತ್ವದಲ್ಲಿ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಬಾಲಕರು, ಶಶಿನಾಯ್ಕ ಬಿ. ನೇತೃತ್ವದಲ್ಲಿ ಸೇಂಟ್ ಜೋಸೆಫ್ ಪ್ರೌಢಶಾಲೆ ಬಾಲಕರು.

ಹೃದಯ ಆರ್. ನೇತೃತ್ವದಲ್ಲಿ ಭಾರತ ಸ್ಕೌಟ್ಸ್ & ಗೈಡ್ಸ್ ಸ್ಕೌಟ್ ವಿಭಾಗದ ಬಾಲಕರು, ಅಲಿಯಾ ಎ. ನೇತೃತ್ವದಲ್ಲಿ ಆಲ್ ಮೊಹಮ್ಮದ್ ಹೈಸ್ಕೂಲ್ ಬಾಲಕಿಯರು (ಆರ್.ಎಂ.ಎಲ್ ನಗರ), ವಿಶ್ವೇಶ್ ಜೆ. ನೇತೃತ್ವದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಲಕರು (ಗಾಜನೂರು), ಸುಫಿಯಾ ಬಾನು ನೇತೃತ್ವದಲ್ಲಿ ಆಲ್ ಇಲಾಲ್ ಆಂಗ್ಲ ಪ್ರೌಢಶಾಲೆ ಬಾಲಕಿಯರು (ಲಷ್ಕರ್ ಮೊಹಲ್ಲಾ), ದೀಕ್ಷಾ ನೇತೃತ್ವದಲ್ಲಿ ಭಾರತ ಸ್ಕೌಟ್ಸ್ & ಗೈಡ್ಸ್ ಗೈಡ್ ವಿಭಾಗದ ಬಾಲಕಿಯರು, ಉಮ್ಮೇಹಾನಿ ನೇತೃತ್ವದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ಬಿ.ಹೆಚ್. ರಸ್ತೆ), ಶ್ರೇಯಾ ಎಂ. ಬೋಟಿ ನೇತೃತ್ವದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಲಕಿಯರು (ಗಾಜನೂರು) ತುಕಡಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.







–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















