SHIVAMOGGA LIVE NEWS | 23 JUNE 2024
SHIMOGA : ತೀವ್ರ ಕುತೂಹಲ ಮೂಡಿಸಿರುವ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿ ಚುನಾವಣೆಗೆ (Election) ಅಖಾಡ ಸಿದ್ಧವಾಗಿದೆ. ನಿರ್ದೇಶಕರ ಚುನಾವಣೆಗೆ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 7 ಅಭ್ಯರ್ಥಿಗಳು ಶನಿವಾರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ಯಾರೆಲ್ಲ ನಾಮಪತ್ರ ಹಿಂಪಡೆದಿದ್ದಾರೆ?
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ 13 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ವಿವಿಧ ಕ್ಷೇತ್ರದಿಂದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ 7 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಎಂ.ಶ್ರೀಕಾಂತ್, ಆರ್.ವಿಜಯ ಕುಮಾರ್, ಹೆಚ್.ಮಲ್ಲಿಕ್, ಹೆಚ್.ಎನ್.ವಿಜಯ ಕುಮಾರ್, ಟಿ.ಎಸ್.ದುದ್ದೇಶ್, ಹೆಚ್.ಜಿ.ಮಲ್ಲಯ್ಯ ಮತ್ತು ಆರ್.ಸಿ.ನಾಯ್ಕ್ ನಾಮಪತ್ರ ಹಿಂಪಡೆದಿದ್ದಾರೆ.
ಯಾರೆಲ್ಲ ಯಾವ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ?
ವಿವಿಧ ಸಹಕಾರ ಸಂಘಗಳಿಂದ ಪ್ರತಿ ತಾಲೂಕಿಗೆ ಒಬ್ಬರು ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರಗಳಿಗೆ ಪ್ರತಿ ತಾಲೂಕಿನಿಂದ ಅಖಾಡದಲ್ಲಿರುವವರ ಹೆಸರು ಇಲ್ಲಿದೆ.
ಕ್ಷೇತ್ರ | ಅಭ್ಯರ್ಥಿಗಳು |
ಶಿವಮೊಗ್ಗ | ಕೆ.ಪಿ.ದುಗ್ಗಪ್ಪಗೌಡ, ಶಿವನಂಜಪ್ಪ |
ಭದ್ರಾವತಿ | ಹೆಚ್.ಎಲ್.ಷಡಾಕ್ಷರಿ, ಸಿ.ಹನುಮಂತು |
ತೀರ್ಥಹಳ್ಳಿ | ಬಸವಾನಿ ವಿಜಯದೇವ್, ಶಿವಕುಮಾರ್ |
ಸಾಗರ | ಗೋಪಾಲಕೃಷ್ಣ ಬೇಳೂರು, ರತ್ನಾಕರ್ ಹೊನಗೋಡು |
ಶಿಕಾರಿಪುರ | ಚಂದ್ರಶೇಖರ ಗೌಡ, ಅಗಡಿ ಅಶೋಕ್ |
ಸೊರಬ | ಕೆ.ಪಿ.ರುದ್ರಗೌಡ, ನೀಲಕಂಠಗೌಡ, ಶಿವಮೂರ್ತಿಗೌಡ |
ಹೊಸನಗರ ತಾಲೂಕಿನಲ್ಲಿ ಅವಿರೋಧ ಆಯ್ಕೆಯಾಗಿದೆ. ನಾಮಪತ್ರ ಪುರಸ್ಕೃತವಾದ ಹಿನ್ನೆಲೆ ಎಂ.ಎಂ.ಪರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ಸಂಸ್ಕರಣ ಸಂಘಗಳ ವತಿಯಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಸ್ಪರ್ಧೆಯಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ | ಆರ್.ಎಂ.ಮಂಜುನಾಥ ಗೌಡ, ವಿರೂಪಾಕ್ಷಪ್ಪ |
ಸಾಗರ ಉಪ ವಿಭಾಗ | ಜಿ.ಎನ್.ಸುಧೀರ್, ಬಿ.ಡಿ.ಭೂಕಾಂತ್ |
ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳ ವತಿಯಿಂದ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ | ಮರಿಯಪ್ಪ, ಎಸ್.ಪಿ.ದಿನೇಶ್ |
ಸಾಗರ ಉಪ ವಿಭಾಗ | ರವೀಂದ್ರ, ಬಸವರಾಜ |
ಇನ್ನಿತರೆ ಸಹಕಾರ ಸಂಘಗಳ ವತಿಯಿಂದ ಇಬ್ಬರು ಸದಸ್ಯರ ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶಿವಮೊಗ್ಗ ಉಪ ವಿಭಾಗ | ಜಗದೀಶ್ವರ್, ಜೆ.ಪಿ.ಯೋಗೇಶ್, ಹೆಚ್.ಬಿ.ದಿನೇಶ್ ಬುಳ್ಳಾಪುರ, ಡಿ.ಆನಂದ್, ಮಹಾಲಿಂಗಯ್ಯ ಶಾಸ್ತ್ರಿ |
ಸಾಗರ ಉಪ ವಿಭಾಗ | ಟಿ.ಶಿವಶಂಕರಪ್ಪ, ಎನ್.ಡಿ.ಹರೀಶ್ |
ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ನ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ 10 ನಿರ್ದೇಶಕರು, ಶಿವಮೊಗ್ಗ ಹಾಲು ಒಕ್ಕೂಟದ ಹಾಲಿ 6 ನಿರ್ದೇಶಕರು ಕಣದಲ್ಲಿದ್ದಾರೆ. ಜೂನ್ 28ರಂದು ಡಿಸಿಸಿ ಬ್ಯಾಂಕ್ನ ಪ್ರಧಾನ ಕಚೇರಿ ಆವರಣದಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ – ಪರೀಕ್ಷೆಯ ಹಾಲ್ ಟಿಕೆಟ್ ತೋರಿಸಿದರೆ KSRTC ಬಸ್ಗಳಲ್ಲಿ ಉಚಿತ ಪ್ರಯಾಣ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200