ತೀವ್ರ ಕುತೂಹಲ ಮೂಡಿಸಿದೆ ಡಿಸಿಸಿ ಬ್ಯಾಂಕ್‌ ಚುನಾವಣೆ, ಕಣದಲ್ಲಿದ್ದಾರೆ 28 ಅಭ್ಯರ್ಥಿಗಳು, ಇಲ್ಲಿದೆ ಲಿಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 23 JUNE 2024

SHIMOGA : ತೀವ್ರ ಕುತೂಹಲ ಮೂಡಿಸಿರುವ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್‌) ಆಡಳಿತ ಮಂಡಳಿ ಚುನಾವಣೆಗೆ (Election) ಅಖಾಡ ಸಿದ್ಧವಾಗಿದೆ. ನಿರ್ದೇಶಕರ ಚುನಾವಣೆಗೆ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 7 ಅಭ್ಯರ್ಥಿಗಳು ಶನಿವಾರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

ಯಾರೆಲ್ಲ ನಾಮಪತ್ರ ಹಿಂಪಡೆದಿದ್ದಾರೆ?

ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ 13 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ವಿವಿಧ ಕ್ಷೇತ್ರದಿಂದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ 7 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಎಂ.ಶ್ರೀಕಾಂತ್‌, ಆರ್‌.ವಿಜಯ ಕುಮಾರ್‌, ಹೆಚ್‌.ಮಲ್ಲಿಕ್‌, ಹೆಚ್‌.ಎನ್.ವಿಜಯ ಕುಮಾರ್‌, ಟಿ.ಎಸ್‌.ದುದ್ದೇಶ್‌, ಹೆಚ್‌.ಜಿ.ಮಲ್ಲಯ್ಯ ಮತ್ತು ಆರ್‌.ಸಿ.ನಾಯ್ಕ್‌ ನಾಮಪತ್ರ ಹಿಂಪಡೆದಿದ್ದಾರೆ.

ಯಾರೆಲ್ಲ ಯಾವ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ?

ವಿವಿಧ ಸಹಕಾರ ಸಂಘಗಳಿಂದ ಪ್ರತಿ ತಾಲೂಕಿಗೆ ಒಬ್ಬರು ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರಗಳಿಗೆ ಪ್ರತಿ ತಾಲೂಕಿನಿಂದ ಅಖಾಡದಲ್ಲಿರುವವರ ಹೆಸರು ಇಲ್ಲಿದೆ.

ಕ್ಷೇತ್ರಅಭ್ಯರ್ಥಿಗಳು
ಶಿವಮೊಗ್ಗಕೆ.ಪಿ.ದುಗ್ಗಪ್ಪಗೌಡ, ಶಿವನಂಜಪ್ಪ
ಭದ್ರಾವತಿಹೆಚ್‌.ಎಲ್.ಷಡಾಕ್ಷರಿ, ಸಿ.ಹನುಮಂತು
ತೀರ್ಥಹಳ್ಳಿಬಸವಾನಿ ವಿಜಯದೇವ್‌, ಶಿವಕುಮಾರ್‌
ಸಾಗರಗೋಪಾಲಕೃಷ್ಣ ಬೇಳೂರು, ರತ್ನಾಕರ್‌ ಹೊನಗೋಡು
ಶಿಕಾರಿಪುರಚಂದ್ರಶೇಖರ ಗೌಡ, ಅಗಡಿ ಅಶೋಕ್‌
ಸೊರಬಕೆ.ಪಿ.ರುದ್ರಗೌಡ, ನೀಲಕಂಠಗೌಡ, ಶಿವಮೂರ್ತಿಗೌಡ

ಹೊಸನಗರ ತಾಲೂಕಿನಲ್ಲಿ ಅವಿರೋಧ ಆಯ್ಕೆಯಾಗಿದೆ. ನಾಮಪತ್ರ ಪುರಸ್ಕೃತವಾದ ಹಿನ್ನೆಲೆ ಎಂ.ಎಂ.ಪರಮೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ಸಂಸ್ಕರಣ ಸಂಘಗಳ ವತಿಯಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಸ್ಪರ್ಧೆಯಲ್ಲಿದ್ದಾರೆ.

ಶಿವಮೊಗ್ಗ ಉಪ ವಿಭಾಗಆರ್‌.ಎಂ.ಮಂಜುನಾಥ ಗೌಡ, ವಿರೂಪಾಕ್ಷಪ್ಪ
ಸಾಗರ ಉಪ ವಿಭಾಗಜಿ.ಎನ್.ಸುಧೀರ್‌, ಬಿ.ಡಿ.ಭೂಕಾಂತ್‌

ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳ ವತಿಯಿಂದ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಶಿವಮೊಗ್ಗ ಉಪ ವಿಭಾಗಮರಿಯಪ್ಪ, ಎಸ್‌.ಪಿ.ದಿನೇಶ್‌
ಸಾಗರ ಉಪ ವಿಭಾಗರವೀಂದ್ರ, ಬಸವರಾಜ

ಇನ್ನಿತರೆ ಸಹಕಾರ ಸಂಘಗಳ ವತಿಯಿಂದ ಇಬ್ಬರು ಸದಸ್ಯರ ಆಯ್ಕೆ ಮಾಡಲಾಗುತ್ತದೆ. ಈ ಕ್ಷೇತ್ರದಿಂದ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಿವಮೊಗ್ಗ ಉಪ ವಿಭಾಗಜಗದೀಶ್ವರ್‌, ಜೆ.ಪಿ.ಯೋಗೇಶ್‌, ಹೆಚ್.‌ಬಿ.ದಿನೇಶ್‌ ಬುಳ್ಳಾಪುರ, ಡಿ.ಆನಂದ್‌, ಮಹಾಲಿಂಗಯ್ಯ ಶಾಸ್ತ್ರಿ
ಸಾಗರ ಉಪ ವಿಭಾಗಟಿ.ಶಿವಶಂಕರಪ್ಪ, ಎನ್‌.ಡಿ.ಹರೀಶ್‌

ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಸೇರಿದಂತೆ 10 ನಿರ್ದೇಶಕರು, ಶಿವಮೊಗ್ಗ ಹಾಲು ಒಕ್ಕೂಟದ ಹಾಲಿ 6 ನಿರ್ದೇಶಕರು ಕಣದಲ್ಲಿದ್ದಾರೆ. ಜೂನ್‌ 28ರಂದು ಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿ ಆವರಣದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ – ಪರೀಕ್ಷೆಯ ಹಾಲ್‌ ಟಿಕೆಟ್‌ ತೋರಿಸಿದರೆ KSRTC ಬಸ್‌ಗಳಲ್ಲಿ ಉಚಿತ ಪ್ರಯಾಣ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment