SHIVAMOGGA LIVE NEWS, 20 JANUARY 2025
ಶಿವಮೊಗ್ಗ : ATMನಿಂದ ಹಣ ಡ್ರಾ ಮಾಡಲು ಅಪರಿಚಿತನ ನೆರವು ಪಡೆದ ರೈತರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದ ಯುನಿಯನ್ ಬ್ಯಾಂಕ್ ಎಟಿಎಂನಲ್ಲಿ ತುರ್ತು ಹಣ ಬಿಡಿಸಲು ಬಂದಾಗ ಘಟನೆ ನಡೆದಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಪರಮೇಶ್ವರಪ್ಪ ವಂಚನೆಗೊಳಗಾದವರು. ಪರಮೇಶ್ವರಪ್ಪ ಅವರ ಸಹೋದರ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆಕ್ಸಿಜನ್ ಯಂತ್ರದ ಖರೀದಿಗೆ ಹಣ ಬೇಕಿದ್ದರಿಂದ ಡಿ.26ರಂದು ಪರಮೇಶ್ವರಪ್ಪ ಎಟಿಎಂ ಕೇಂದ್ರಕ್ಕೆ ಬಂದಿದ್ದರು. ಹಣ ಬಿಡಿಸಲು ಬಾರದಿದ್ದರಿಂದ ಎಟಿಎಂ ಕೇಂದ್ರದ ಬಳಿ ಅಪರಿಚಿತನ ನೆರವು ಪಡೆದಿದ್ದರು.
ಪರಮೇಶ್ವರಪ್ಪ ಅಪರಿಚಿತನಿಗೆ ತಮ್ಮ ಎಟಿಎಂ ಕಾರ್ಡ್ ಕೊಟ್ಟು, ಪಾಸ್ ವರ್ಡ್ ತಿಳಿಸಿದ್ದರು. ಆತ ಎಟಿಎಂನಿಂದ 16 ಸಾವಿರ ರೂ. ಹಣ ಬಿಡಿಸಿ ಕೊಟ್ಟಿದ್ದ. ಆದರೆ ಪರಮೇಶ್ವರಪ್ಪ ಅವರ ಎಟಿಎಂ ಕಾರ್ಡ್ ಬದಲು ಬೇರೊಂದು ಎಟಿಎಂ ಕಾರ್ಡ್ ನೀಡಿದ್ದ. ಪರಮೇಶ್ವರಪ್ಪ ಅವರು ತಮ್ಮೂರಿಗೆ ತೆರಳಿದ್ದು ಡಿ.27ರಂದು ತುರ್ತು ಹಣದ ಅಗತ್ಯವಿದ್ದರಿಂದ ಮಗನಿಗೆ ಎಟಿಎಂ ಕಾರ್ಡ್ ಕೊಟ್ಟಾಗ ಅದು ತಮ್ಮ ಎಟಿಎಂ ಕಾರ್ಡ್ ಅಲ್ಲ ಅನ್ನುವುದು ಅವರ ಗಮನಕ್ಕೆ ಬಂದಿದೆ.ಎಟಿಎಂ ಕಾರ್ಡ್ ಬದಲಿಸಿ ಕೊಟ್ಟ
ಪರಮೇಶ್ವರಪ್ಪ ಅವರ ಬಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಟಿಎಂ ಕಾರ್ಡ್ ಇತ್ತು. ಆದರೆ ಅಪರಿಚಿತ ಆ ಕಾರ್ಡ್ ಬದಲು ಯುನಿಯನ್ ಬ್ಯಾಂಕ್ ಕಾರ್ಡ್ ನೀಡಿದ್ದ. ಕಾರ್ಡ್ ಬದಲಾದ ವಿಷಯ ಗೊತ್ತಾದ ಕೂಡಲೆ ಪರಮೇಶ್ವರಪ್ಪ ಪುತ್ರನೊಂದಿಗೆ ಬ್ಯಾಂಕ್ಗೆ ತೆರಳಿ ಎಟಿಎಂ ಬ್ಲಾಕ್ ಮಾಡುವಂತೆ ತಿಳಿಸಿದರು. ಅಷ್ಟರಲ್ಲಾಗಲೆ ಪರಮೇಶ್ವರಪ್ಪ ಅವರ ಬ್ಯಾಂಕ್ ಖಾತೆಯಿಂದ 55 ಸಾವಿರ ರೂ. ಹಣ ಡ್ರಾ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ » ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?