ವಿದ್ಯಾನಗರದಲ್ಲಿ ಮಾರಕಾಸ್ತ್ರಗಳಿಂದ ದಾಳಿ, ಯುವಕನ ತಲೆಗೆ ಗಂಭೀರ ಗಾಯ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 23 JUNE 2024

SHIMOGA : ರೌಡಿ ಶೀಟರ್‌ ಒಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ (Attack) ನಡೆಸಲಾಗಿದೆ. ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಗಾಯಗೊಂಡಿದ್ದ ರೌಡಿ ಶೀಟರ್‌ ಕಾರ್ತಿಕ್‌ ಅಲಿಯಾಸ್‌ ಕತ್ತೆ ಕಾರ್ತಿಕ್‌ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ.

vidyanagara attack

ಹೊಸಮನೆ ನಿವಾಸಿ ಕಾರ್ತಿಕ್‌ನ ತಲೆ ಭಾಗ, ಕೈಗಳಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ರಕ್ತ ಸುರಿಯುತ್ತಿದ್ದರು ಮನೆಗೆ ತೆರಳಿದ್ದ. ಕೊನೆಗೆ ಆತನ ಕುಟುಂಬದವರೆ ಕಾರ್ತಿಕ್‌ನನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದರು. ಹಳೆ ದ್ವೇಷವೆ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದು – ಮಾತಿಗೆ ಮಾತು ಬೆಳೆದು ತಂದೆಯ ಹೊಟ್ಟೆಗೆ ಇರಿದು ಕೊಂದ ಅಪ್ರಾಪ್ತ

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಜೂನ್ 23, 2024

Leave a Comment