ಲಾಕ್ ಡೌನ್ನಲ್ಲಿ ಅಡ್ಡದಾರಿ ಹಿಡಿಯೋರಿಗೆ ಬ್ರೇಕ್, ಶಿವಮೊಗ್ಗದಲ್ಲಿ ಏರಿಯಾ ಬಿಟ್ಟು ಹೊರಬಾರದಂತೆ ಲಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 MAY 2021

ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಮತ್ತು ವಾರ್ಡ್ ಬಿಟ್ಟು ಜನರು ಹೊರಗೆ ಬಾರದಂತೆ ತಡೆಯಲು ರಸ್ತೆಗಳನ್ನು ಸೀಲ್‍ ಡೌನ್ ಮಾಡಲಾಗಿದೆ.

ಪ್ರಮುಖ ಬಡಾವಣೆಗಳಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡದಾರಿಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಬಡಾವಣೆಯ ಒಂದು ರಸ್ತೆಯಿಂದ ಮಾತ್ರ ಮೇನ್ ರಸ್ತೆಗೆ ಬರಲು ಅವಕಾಶ ಮಾಡಲಾಗಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅನಗತ್ಯ ರಸ್ತೆಗಿಳಿದವರ ವಾಹನ ಸೀಜ್ ಮಾಡಲು ಅವಕಾಶವಾಗಲಿದೆ.

ಗಾಂಧಿ ನಗರ, ಬಸವನಗುಡಿ, ವೆಂಟಕೇಶ ನಗರ, ರವೀಂದ್ರನಗರ ಸೇರಿದಂತೆ ಸೇರಿದಂತೆ ವಿವಿಧೆಡೆ ಅಡ್ಡರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗಾಗಿ ವಾಹನ ಸವಾರರು ಸುತ್ತಿ ಬಳಸಿ ಓಡಾಡಬೇಕಾಗಿದೆ.

ಇದನ್ನೂ ಓದಿ | ವಾಹನ ತಪಾಸಣೆ ಮಾಡ್ತಿದ್ದ ಮಹಿಳಾ ಪಿಎಸ್ಐಗೆ ಅವಾಜ್, ಸಿಎಂ ವಿರುದ್ಧ ಬಿಜೆಪಿ ಕಾರ್ಯಕರ್ತ ಗರಂ, ವಿಡಿಯೋ ವೈರಲ್

ಅಡ್ಡದಾರಿಯಲ್ಲಿ ಎಷ್ಟೆ ಓಡಾಡಿದರೂ ಬಡಾವಣೆಯೊಳಗೆ ಓಡಾಡಬೇಕಾಗಿದೆ. ಮುಖ್ಯ ರಸ್ತೆಗೆ ಬಂದರೆ ಪೊಲೀಸ್ ಚೆಕ್‍ ಪೋಸ್ಟ್‍ನಲ್ಲಿ ಸಿಕ್ಕಿಬೀಳಬೇಕಾಗುತ್ತದೆ.

ಇದನ್ನೂ ಓದಿ | ಲಾಕ್ ಡೌನ್ ಮೊದಲ ದಿನವೆ ಐನೂರು ಬೈಕ್ ಪೊಲೀಸ್ ವಶಕ್ಕೆ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment