NEWS HIGHLIGHTS
ಶಿವಮೊಗ್ಗ: ರಾಜ್ಯದಲ್ಲಿ ಹಾಲು, ವಿದ್ಯುತ್ ದರ ಸಣ್ಣ ಮಟ್ಟಿಗೆ ಏರಿಕೆಯಾದಾಗ ಬಿಜೆಪಿ ನಾಯಕರು ಬೀದಿಗಿಳಿದು ರಂಪಾಟ ಮಾಡಿದ್ದರು. ಈಗ ಗೊಬ್ಬರ (Fertilizers) ದರ ಪ್ರತಿ ಚೀಲಕ್ಕೆ ₹180ರವರೆಗೆ ಏರಿಕೆಯಾಗಿದೆ. ಈಗ ಬಿಜೆಪಿ ನಾಯಕರ ಬಾಯಿ ಒಣಗಿ ಹೋಗಿದೆಯೆ ಎಂದು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಪ್ರತಿ ಮೂಟೆ ಗೊಬ್ಬರ ₹1800ರವರೆಗೆ ತಲುಪಿದೆ. ಸಣ್ಣ ರೈತರಿಗೆ ಇದರಿಂದ ಹೊರೆಯಾಗಿದೆ. ಭತ್ತ ಬೆಳೆಯೋದೆ ಕಷ್ಟವಾಗಿದೆ. ಗೊಬ್ಬರದ ದರ ಹೆಚ್ಚಳದಿಂದ ರೈತರಿಗೆ ಮತ್ತಷ್ಟು ಸಂಕಷ್ಟವಾಗಿದೆ ಎಂದರು.

ಹಾಲು, ವಿದ್ಯುತ್ ದರ ಹೆಚ್ಚಳದ ವಿರುದ್ಧ ಬಿ.ವೈ.ವಿಜಯೇಂದ್ರ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದರು. ಈಗ ಅವರ ಉಸಿರೆತ್ತುತ್ತಿಲ್ಲ. ಇದೇನ ಮೋದಿ ಕೊಡುಗೆ.ಬೇಳೂರು ಗೋಪಾಲಕೃಷ್ಣ, ಶಾಸಕ
ಇದನ್ನೂ ಓದಿ » ‘ಮಿನಿಸ್ಟರ್ ರಾಜೀನಾಮೆ ನೀಡಲಿ, ತನಿಖೆ ಎದುರಿಸಲಿʼ, ಬೇಳೂರು ಗೋಪಾಲಕೃಷ್ಣ ಸಲಹೆ, ಕಾಂಗ್ರೆಸ್ನಲ್ಲಿ ಸಂಚಲನ

