ಶಿವಮೊಗ್ಗದಲ್ಲಿ ಬಸ್‌ ಸಿಗದೆ ಪ್ರಯಾಣಿಕರ ಪರದಾಟ, ರೂಟ್‌ ಗೊತ್ತಿಲ್ಲದೆ ಡ್ರೈವರ್‌ಗಳ ಪೇಚಾಟ, ಕಾರಣವೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 10 MAY 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಚುನಾವಣಾ ಕಾರ್ತವ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು (Bus) ನಿಯೋಜನೆ ಮಾಡಿರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಇನ್ನು, ಬಿಎಂಟಿಸಿ ಬಸ್ಸುಗಳು ಶಿವಮೊಗ್ಗದಲ್ಲಿ ಸಂಚರಿಸುತ್ತಿದ್ದು, ಚಾಲಕರು ಮಾರ್ಗ ಗೊತ್ತಾಗದೆ ಗೊಂದಲಕ್ಕೀಡಾಗಿದ್ದಾರೆ.

BMTC-Bus-to-Shimoga-during-Election

ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಕಾದು ಕಾದು ಸುಸ್ತಾದ ಪ್ರಯಾಣಿಕರು

ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧೆಡೆಗೆ ತೆರಳಲು ಹೆಚ್ಚಿನ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆದರೆ ಬಸ್ಸುಗಳು ಸಿಗದೆ ಗಂಟೆಗಟ್ಟಲೆ ಕಾದು ಹೈರಾಣಾಗಿದ್ದಾರೆ. ಗಂಟೆಗೊಂದು ಬಸ್‌ ಬರುತ್ತಿರುವುದರಿಂದ ಎಲ್ಲಾ ಸೀಟುಗಳು ಕ್ಷಣಮಾತ್ರದಲ್ಲಿ ಭರ್ತಿಯಾಗುತ್ತಿವೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮತದಾನ ಬಿರುಸು, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ವೋಟಿಂಗ್?

ʼದಾವಣಗೆರೆಯಲ್ಲಿ ಮತ ಚಲಾಯಿಸಲು ಹೋಗಬೇಕಿದೆ. ಆದರೆ ಎಷ್ಟೊತ್ತಿಗೋ ಒಂದೊಂದು ಬಸ್‌ (Bus) ಬರುತ್ತೆ. ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಬಸ್‌ ಸೀಟ್‌ ಹಿಡಿಯೋದೇ ಕಷ್ಟವಾಗಿದೆʼ ಅನ್ನುತ್ತಾರೆ ಗೃಹಿಣಿ ಸವಿತಾ.

ಬೆಂಗಳೂರಿಗೆ ಬಿಎಂಟಿಸಿ ಬಸ್‌

ಇನ್ನು, ಬೆಂಗಳೂರಿನಿಂದ ಶಿವಮೊಗ್ಗ ರೂಟ್‌ನಲ್ಲಿ ಕೆಎಸ್‌ಅರ್‌ಟಿಸಿ ಬಸ್‌ಗಳ ಕೊರತೆ ಅಗಿದ್ದರಿಂದ ಬಿಎಂಟಿಸಿ ಬಸ್ಸುಗಳನ್ನು ನಿಯೋಜಿಸಲಾಗಿತ್ತು. ಇದೆ ಬಸ್ಸುಗಳು ಈಗ ಶಿವಮೊಗ್ಗ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಬಸ್ಸುಗಳು ಬಂದ ಕ್ಷಣ ಹೊತ್ತಲ್ಲೇ ಸೀಟುಗಳು ಭರ್ತಿಯಾಗುತ್ತಿವೆ.

BMTC bus to Shimoga city

ಟಿಕೆಟ್‌ ವಿಚಾರದಲ್ಲಿ ಗೊಂದಲ

ಇತ್ತ ಬಿಎಂಟಿಸಿ ಚಾಲಕರಿಗೆ ಶಿವಮೊಗ್ಗ – ಬೆಂಗಳೂರು ಮಾರ್ಗದ ಪರಿಚಯವಿಲ್ಲ. ಹಾಗಾಗಿ ಅಲ್ಲಲ್ಲಿ ಮಾರ್ಗ ಕೇಳಿಕೊಂಡು ತೆರಳುತ್ತಿದ್ದಾರೆ. ಇನ್ನು, ಬಿಎಂಟಿಸಿ ಬಸ್ಸುಗಳಲ್ಲಿ ವಿತರಣೆ ಮಾಡುತ್ತಿರುವ ಟಿಕೆಟ್‌ ಗೊಂದಲ ಮತ್ತು ಕಾನೂನು ಬಾಹಿರವಾಗಿದೆ. ಶಿವಮೊಗ್ಗ ಬೆಂಗಳೂರು ಅಥವಾ ಬೆಂಗಳೂರು ಶಿವಮೊಗ್ಗ ಎಂದು ಟಿಕೆಟ್‌ ವಿತರಣೆ ಮಾಡುವ ಬದಲು ಬೆಂಗಳೂರಿನ ರೂಟ್‌ನ ಟಿಕೆಟ್‌ಗಳನ್ನೇ ವಿತರಿಸಲಾಗುತ್ತಿದೆ.

ʼಬೆಂಗಳೂರು ಮಾರ್ಗದ ಬಸ್ಸುಗಳಲ್ಲಿ ಸಿಟಿ ಮಾರ್ಕೆಟ್‌ನ ಟಿಕೆಟ್‌ ಕೊಡಲಾಗುತ್ತಿದೆ. ಒಂದು ವೇಳೆ ಅವಘಡ ಸಂಭವಿಸಿದರೆ, ಈ ಟಿಕೆಟ್‌ ಬಳಸಿ ಇನ್ಷುರೆನ್ಸ್‌ ಪಡೆಯಲು ಆಗುವುದಿಲ್ಲ. ಬಸ್ಸುಗಳು ಇಲ್ಲದಿದ್ದರೆ ಕಡೇ ಪಕ್ಷ ಟಿಕೆಟ್‌ ವಿತರಣೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಿತ್ತುʼ ಅನ್ನುತ್ತಾರೆ ಬಸ್ಸಿನಲ್ಲಿ ತೆರಳುತ್ತಿರುವ ವಕೀಲ ಶಿವರಾಂ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment