ಶಿವಮೊಗ್ಗ : ಕಾಶ್ಮೀರದ ಪಹಾಲ್ಗಾಮ್ನಲ್ಲಿ ಉಗ್ರರ ದಾಳಿಗೆ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಮಂಜನಾಥ್ ಮನೆ (House) ಬಳಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ » ಕಾಶ್ಮೀರದಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ, ಪತ್ನಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್
ಶಿವಮೊಗ್ಗದ ನೇತಾಜಿ ವೃತ್ತದ ಬಳಿ ವಿಜಯನಗರ ಬಡಾವಣೆಯ 3ನೇ ಅಡ್ಡರಸ್ತೆಯ ಮಂಜುಶ್ರೀ ನಿಲಯದಲ್ಲಿ (House) ಮಂಜುನಾಥ್ ಅವರ ಕುಟಂಬ ವಾಸವಿದೆ.
ತಾಯಿಗೆ ವಿಷಯ ತಿಳಿದಿಲ್ಲ
ಮಂಜುನಾಥ್ ರಾವ್ ತಮ್ಮ ಪತ್ನಿ ಪಲ್ಲವಿ ಮತ್ತು ಮಗನ ಜೊತೆಗೆ ಕಾಶ್ಮೀರಕ್ಕೆ ತೆರಳಿದ್ದರು. ಅವರ ತಾಯಿ ಮನಲ್ಲೆ ಇದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆ ಹಿನ್ನೆಲೆ ಮತ್ತು ಆಘಾತಕ್ಕೆ ಒಳಗಾಗಬಹುದು ಎಂಬ ಕಾರಣಕ್ಕೆ ಮಂಜುನಾಥ್ ಮೃತರಾದ ವಿಷಯವನ್ನು ಅವರಿಗೆ ತಿಳಿಸಿಲ್ಲ.
ಮಂಜುನಾಥ್ ಅವರ ತಾಯಿ ನನಗೆ ದೊಡ್ಡಮ್ಮ. ಅವರಿಗೆ ವಿಷಯ ತಿಳಿಸಿಲ್ಲ. ಕಾಶ್ಮೀರದಲ್ಲಿ ದಾಳಿಯಾಗಿದೆ, ಗಾಯವಾಗಿದೆ ಎಂದಷ್ಟೆ ಹೇಳಿದ್ದೇವೆ. ಕಾಶ್ಮೀರದಲ್ಲಿ ಏನಾಗುತ್ತಿದೆ ಅನ್ನವುದು ಸಂಪರ್ಣ ಮಾಹಿತಿ ನಮಗು ಲಭಿಸಿಲ್ಲ.
– ದೀಪಾ, ಮಂಜುನಾಥ್ ಸಂಬಂಧಿ
ಸಂಬಂಧಿಗಳು, ಸ್ನೇಹಿತರ ಭೇಟಿ
ಮಂಜುನಾಥ್ ರಾವ್ ಹತ್ಯೆ ವಿಚಾರ ತಿಳಿದು ಕುಟುಂಬದವರು, ಸ್ನೇಹಿತರು ವಿಜಯನಗರ ಮನೆಗೆ ಭೇಟಿ ನೀಡುತ್ತಿದ್ದಾರೆ. ಕಾಶ್ಮೀರದಲ್ಲಿ ಪಲ್ಲವಿ ಅವರನ್ನು ಸಂಪರ್ಕಿಸಲು ಎಲ್ಲರು ಪ್ರಯತ್ನಿಸುತ್ತಿದ್ದಾರೆ. ಆದರೆ ಮೊಬೈಲ್ ಚಾರ್ಜ್ ಇಲ್ಲದ್ದರಿಂದ ಪಲ್ಲವಿ ಅವರ ಸಂಪರ್ಕ ಕಷ್ಟವಾಗಿದೆ.
ಇದೇ ಮೊದಲ ಬಾರಿ ಮಂಜುನಾಥ್ ಅವರ ಕುಟುಂಬ ಕಾಶ್ಮೀರಕ್ಕೆ ತೆರಳಿತ್ತು. ಬೆಳಗ್ಗೆ ಅವರ ಫೋಟೊಗಳನ್ನು ನೋಡಿದ್ದೆ. ಆದರೆ ಸಂಜೆ ವೇಳೆಗೆ ಹೀಗೆ ಅಗಿದೆ. ನಮ್ಮ ಕುಟುಂಬದವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
– ಡಾ.ರವಿಕಿರಣ್, ಸಂಬಂಧಿ
ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರ ಮನೆ ಬಳಿ ಸಂಸದ ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಭೇಟಿ ನೀಡಿದರು. ಕುಟುಂಬದವರ ಜೊತೆಗೆ ಚರ್ಚೆ ನಡೆಸಿದರು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200