ಶಿವಮೊಗ್ಗ – ಆಗುಂಬೆ ಮಾರ್ಗದ ಬಸ್ಸಿನ ಕಂಡಕ್ಟರ್‌ಗೆ ಜೀವ ಬೆದರಿಕೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 23 MAY 2024
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

SHIMOGA : ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಖಾಸಗಿ ಬಸ್‌ ಸಿಬ್ಬಂದಿ ಮಧ್ಯೆ ಗಲಾಟೆಯಾಗಿದ್ದು, ಕಂಡಕ್ಟರ್‌ (CONDUCTOR) ಒಬ್ಬರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.

ಶಿವಮೊಗ್ಗ – ಆಗುಂಬೆ (Agumbe) ಮಾರ್ಗದ ಎರಡು ಬಸ್ಸುಗಳ ಸಿಬ್ಬಂದಿ ಮಧ್ಯೆ ಗಲಾಟೆಯಾಗಿದೆ. ಬೆಳಗ್ಗೆ 4.33ಕ್ಕೆ ಒಂದು ಬಸ್‌ ಈ ಮಾರ್ಗದಲ್ಲಿ ಹೊರಡಬೇಕಿತ್ತು. ಬೆಳಗ್ಗೆ 5 ಗಂಟೆಗೆ ಮತ್ತೊಂದು ಬಸ್‌ ಹೊರಡಬೇಕಿತ್ತು. ಬೆಳಗ್ಗೆ 4.33ರ ಖಾಸಗಿ ಬಸ್‌ ಹೊರಡುವ ಮೊದಲೇ 5 ಗಂಟೆಯ ಬಸ್‌ ನಿಲ್ದಾಣದ ಪ್ರವೇಶಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿತ್ತು. ಬೆಳಗ್ಗೆ 4.33ರ ಬಸ್ಸಿನ ಕಂಡಕ್ಟರ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಬೆಳಗ್ಗೆ 4.33ರ ಬಸ್ಸಿನ ಕಂಡಕ್ಟರ್‌ ನಂದನ್‌ ಕುಮಾರ್‌ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – RCBಗೆ ಪರ ಯುವತಿಯರ ಘೋಷಣೆ, ಜರ್ಸಿ ನಂಬರ್‌ ಟ್ಯಾಟೋ ಹಾಕಿಸಿಕೊಂಡ ವಿದ್ಯಾರ್ಥಿನಿ

ಚಾಲಕ ನಾಗೇಶ್‌, ಕಂಡಕ್ಟರ್‌ ಹನುಮಂತ, ಅಭಿ ಶೆಣೈ, ಆದರ್ಶ ಎಂಬುವವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment