SHIMOGA : ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಖಾಸಗಿ ಬಸ್ ಸಿಬ್ಬಂದಿ ಮಧ್ಯೆ ಗಲಾಟೆಯಾಗಿದ್ದು, ಕಂಡಕ್ಟರ್ (CONDUCTOR) ಒಬ್ಬರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಶಿವಮೊಗ್ಗ – ಆಗುಂಬೆ (Agumbe) ಮಾರ್ಗದ ಎರಡು ಬಸ್ಸುಗಳ ಸಿಬ್ಬಂದಿ ಮಧ್ಯೆ ಗಲಾಟೆಯಾಗಿದೆ. ಬೆಳಗ್ಗೆ 4.33ಕ್ಕೆ ಒಂದು ಬಸ್ ಈ ಮಾರ್ಗದಲ್ಲಿ ಹೊರಡಬೇಕಿತ್ತು. ಬೆಳಗ್ಗೆ 5 ಗಂಟೆಗೆ ಮತ್ತೊಂದು ಬಸ್ ಹೊರಡಬೇಕಿತ್ತು. ಬೆಳಗ್ಗೆ 4.33ರ ಖಾಸಗಿ ಬಸ್ ಹೊರಡುವ ಮೊದಲೇ 5 ಗಂಟೆಯ ಬಸ್ ನಿಲ್ದಾಣದ ಪ್ರವೇಶಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿತ್ತು. ಬೆಳಗ್ಗೆ 4.33ರ ಬಸ್ಸಿನ ಕಂಡಕ್ಟರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಬೆಳಗ್ಗೆ 4.33ರ ಬಸ್ಸಿನ ಕಂಡಕ್ಟರ್ ನಂದನ್ ಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – RCBಗೆ ಪರ ಯುವತಿಯರ ಘೋಷಣೆ, ಜರ್ಸಿ ನಂಬರ್ ಟ್ಯಾಟೋ ಹಾಕಿಸಿಕೊಂಡ ವಿದ್ಯಾರ್ಥಿನಿ
ಚಾಲಕ ನಾಗೇಶ್, ಕಂಡಕ್ಟರ್ ಹನುಮಂತ, ಅಭಿ ಶೆಣೈ, ಆದರ್ಶ ಎಂಬುವವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.