SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ಈ ಬಾರಿ ಪಟಾಕಿ ಅಬ್ಬರ ಜೋರಿತ್ತು. ಅಮೀರ್ ಅಹಮದ್ ಸರ್ಕಲ್ನಲ್ಲಿ ಬಹು ಹೊತ್ತು ಭಾರಿ ಪ್ರಮಾಣದ ಪಟಾಕಿ (Cracker) ಸಿಡಿಸಲಾಯಿತು.
ಗಣಪತಿ ಮೆರವಣಿಗೆ ಅಮೀರ್ ಅಹಮದ್ ಸರ್ಕಲ್ಗೆ ತಲುಪುವ ಮುನ್ನ ಭಾರಿ ಪ್ರಮಾಣದ ಪಟಾಕಿ ಸಿಡಿಸಲಾಯಿತು. ಆರಂಭದಲ್ಲಿ ಪಟಾಕಿ ಸಿಡಿತಲೆ ಮನರಂಜನೆ ನೀಡಿತು. ಆದರೆ ಕೆಲವೇ ಕ್ಷಣದಲ್ಲಿ ಸರ್ಕಲ್ನಲ್ಲಿ ಮೂರ್ನಾಲ್ಕು ಕಡೆ ಪಟಾಕಿ ಹಚ್ಚಲಾಯಿತು. ಇದರಿಂದ ನೂಕು ನುಗ್ಗಲು ಉಂಟಾಯಿತು. ಬೆಂಕಿ ಕಿಡಿ ಜನರ ಮೈಮೇಲೆ ಬಿದ್ದಿದ್ದರಿಂದ ಆತಂಕದ ಪರಿಸ್ಥಿತಿ ಉಂಟಾಯಿತು.
ಇನ್ನೊಂದೆಡೆ ಪೊಲೀಸರು ತಕ್ಷಣ ಅಲರ್ಟ್ ಆದರು. ಒಂದೇ ಕಡೆ ಪಟಾಕಿ ಸಿಡಿಸುವಂತೆ ಸೂಚಿಸಿದರು. ಅಗ್ನಿಶಾಮಕ ಸಿಬ್ಬಂದಿ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಸುಮಾರು ಅರ್ಧ ಗಂಟೆ ಪಟಾಕಿ ಸಿಡಿಸಲಾಯಿತು.
ಇದನ್ನೂ ಓದಿ » ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಡಿ ಬಾಸ್ ಪರ ಘೋಷಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200