‘ವಿಮಾನ ನಿಲ್ದಾಣ ಆಗುತ್ತಿದ್ದರು ಶಿವಮೊಗ್ಗಕ್ಕೇಕೆ ಹೂಡಿಕೆದಾರರು ಬರುತ್ತಿಲ್ಲ, ಕಾರಣವೇನು?’

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 29 NOVEMBER 2022

ಶಿವಮೊಗ್ಗ : ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾಗುತ್ತಿದೆ. ಹಾಗಾಗಿ ಐದು ಸಾವಿರ ಕೋಟಿ ರೂ. ಹೂಡಿಕೆ ಮಾಡಿಸಿ ಎಂದು ಸವಾಲು ಹಾಕಿದ್ದೆ. ಈ ಬಾರಿ ಹೂಡಿಕೆದಾರರ ಸಮಾವೇಶ ನಡೆಯಿತು. ಶಿವಮೊಗ್ಗ ಜಿಲ್ಲೆಗೆ ಯಾರೊಬ್ಬರು ಹೂಡಿಕೆ ಮಾಡದಿರಲು ಕಾರಣವೇನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. (shimoga airport)

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shimoga Nanjappa Hospital

ಶಿವಮೊಗ್ಗದ ಎನ್ಇಎಸ್ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಕಾಂಗ್ರೆಸ್ ಜಾಗ್ರತಾ ಸಮಿತಿ ಆಯೋಜಿಸಿದ್ದ ಮಲೆನಾಡ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕಮಾರ್ ಅವರು, ಶಿವಮೊಗ್ಗದಲ್ಲಿ ಯಾಕೆ ಯಾರೊಬ್ಬರು ಹೂಡಿಕೆ ಮಾಡುತ್ತಿಲ್ಲ ಎಂದರು.

(shimoga airport)

6 ಗಂಟಗೆ ಅಂಗಡಿ ಬಂದ್

ಶಿವಮೊಗ್ಗದಲ್ಲಿ ನಿತ್ಯ ಕೋಮು ಗಲಭೆ, ಶಾಂತಿ ಭಾಂಗ ಉಂಟಾಗುತ್ತಿದೆ. ಸಂಜೆ ಆರು ಗಂಟೆಗೆಲ್ಲ LIC-HOME-PRASHANTHಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಇದೆ ಕಾರಣಕ್ಕೆ ಶಿವಮೊಗ್ಗದಲ್ಲಿ ಯಾರೊಬ್ಬರು ಹೂಡಿಕೆ ಮಾಡುತ್ತಿಲ್ಲ ಎಂದರು.

ALSO READ – ‘VISLಗೆ ಸಾವಿರಾರು ಕೋಟಿ ಬರುತ್ತೆ ಅಂದಿದ್ದರು, ಒಂದು ಕೋಟಿಯೂ ಹೂಡಿಕೆಯಾಗಲಿಲ್ಲ’

ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೇಳೆ 302 ರೈತರು ಸಂತ್ರಸ್ಥರಾದರು. ಅವರಿಗೆ ನಿವೇಶನ ನೀಡಬೇಕಿತ್ತು. ಈವರೆಗು ಆ ಸಂತ್ರಸ್ಥರಿಗೆ ನಿವೇಶನ ನೀಡಿಲ್ಲ. ಸಂತ್ರಸ್ಥರಿಗೆ ನಿವೇಶನ ನೀಡಲು ಹತ್ತು ವರ್ಷ ಬೇಕಾ ಎಂದು ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದರು.

(shimoga airport)

ದ್ವೇಷ ಹಂಚಿದವರು ಮತ ಕದಿಯುತ್ತಿದ್ದಾರೆ

ಈವರೆಗೂ ದ್ವೇಷ ಹಂಚುತ್ತಿದ್ದ ಬಿಜೆಪಿಯವರು ಈಗ ಮತ ಕದಿಯಲು ಮುಂದಾಗಿದ್ದಾರೆ. ಕಳೆದ 5  ವರ್ಷದಲ್ಲಿ 80 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಚಿಲುಮೆ ಎಂಬ ಹೆಸರಿನಲ್ಲಿ ಸಚಿವ ಅಶ್ವಥ ನಾರಾಯಣ ಕೃಪಾಪೋಷಿತ ನಾಟಕ ಮಂಡಳಿ ಸೃಷ್ಟಿಯಾಗಿದೆ. ಅದಕ್ಕೆ ಬೆಂಬಲವಾಗಿದ್ದ ಅಧಿಕಾರಿಗಳು ಈಗ ಸಿಕ್ಕಿಬಿದ್ದಿದ್ದಾರೆ ಎಂದರು.

(shimoga airport)

ರೈತರ ಖಾತೆಗೆ ಬಂತು ಲಕ್ಷ ಲಕ್ಷ ಹಣ

ಇನ್ನು, ನಮ್ಮ ಕ್ಷೇತ್ರದಲ್ಲಿ ಹಲವು ರೈತರ ಖಾತೆಗೆ ಲಕ್ಷ ಲಕ್ಷ ರೂ. ಹಣ ಬಂದಿದೆ. ರೈತರ ಖಾತೆಯಲ್ಲಿ 10 ಸಾವಿರ ಮಾತ್ರ ಉಳಿಸಿ, ಲಕ್ಷ ಲಕ್ಷ ಹಣವನ್ನು ಚಿಲುಮೆ ಸಂಸ್ಥೆಯವರು ಪಡೆದುಕೊಂಡು ಹೋಗಿದ್ದಾರೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ. ಹಾಗಾಗಿ ಹೆಚ್ಚಿನ ವಿಚಾರವನ್ನು ಆನಂತರ ಚರ್ಚೆ ಮಾಡುತ್ತೇನೆ ಎಂದರು.

Shimoga Nanjappa Hospital

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment